Thursday, April 30, 2009

ತಮಿಳುನಾಡಿನಲ್ಲಿ 'ಕೋವಿಲ್' ಗಳನ್ನ ಹೊಕ್ಕಾಗ...

ಕಳೆದ ವಾರ ಪೂರ್ತಿ ತಮಿಳುನಾಡಿನಲ್ಲಿ ವಿವಿಧ ದೇವಸ್ಥಾನಗಳನ್ನು ತಿರುಗಾಡಿದ್ವಿ. ನಮ್ಮ ಪಯಣ ದೇಹಕ್ಕೆ ಸಾಕಷ್ಟು ದಣಿವನ್ನು ಉಂಟು ಮಾಡಿತ್ತಾದರು ಅದು ಆನಂದಮಯವಾಗಿತ್ತು.

ನಮ್ಮ ಪ್ರಯಾಣ ಶುರುವಾದದ್ದು ಬೆಂಗಳೂರಿನಿಂದ - ಅಪ್ಪ, ಅಮ್ಮ, ವಿಜಯ್, ಅಜ್ಜಿ, ಮಾಮ, ಮಾಮಿ, ಚಿಕ್ಕಮ್ಮಾ, ದೊಡ್ಡಮ್ಮಾ ಹಾಗು ಚಿಕ್ಕಮ್ಮನ ಇಬ್ಬರು ಮಕ್ಕಳು ಸೇರಿ ಏಪ್ರಿಲ್-೨೦ನೆ ತಾರೀಖು ರಾತ್ರಿ ತುತುಕುಡಿ ಎಕ್ಸ್ ಪ್ರೆಸ್ ಹತ್ತಿದ್ದೆವು. ಮೈಸೂರಿನಿಂದ ಹೊರಡುವ ಈ ರೈಲಿನಲ್ಲಿ ನಮ್ಮ ಹಿಂದಿನ ಪ್ರಯಾಣ (ಶ್ರೀರಂಗಪಟ್ಟಣದಿಂದ ಕಾರ್ಮಲಾರಂ) ಇನ್ನು ನೆನಪಿದೆ ನನಗೆ. ಸುಖ ನಿದ್ರೆಯ ನಂತರ ಎಚ್ಚರವಾದಾಗ ನಾವು ಮದುರೈ ತಲುಪಿದ್ದೆವು (ಹೌದು - ರೈಲಿನಲ್ಲಿ ಅಳುವ/ಕಿರುಚಾಡುವ ಚಿಕ್ಕ ಮಕ್ಕಳಿಲ್ಲದಿದ್ದರೆ ಸಾಮಾನ್ಯವಾಗಿ ನಿದ್ರೆ ಚೆನ್ನಾಗಿಯೇ ಆಗುತ್ತದೆ!). ನಮಗೆ ಮಾರ್ಗ ದರ್ಶನ ನೀಡಲು ತಮಿಳು ಬಲ್ಲವರೊಬ್ಬರು ನಮ್ಮೊಡನೆ ಮದುರೈಯಲ್ಲಿ ಸೇರ್ಪಡೆಯಾದರು.

ಇನ್ನೂ ಹೆಚ್ಚು ವಿಸ್ತಾರವಾಗಿ ಹೇಳಿದರೆ ಓದುಗರು ಈ ಲೇಖನದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಬಹುದೆಂದು ಊಹಿಸಿ ಸಂಕ್ಷಿಪ್ತವಾಗಿ ಹೇಳಿಬಿಡ್ತೀನಿ - ನಾವು ನೋಡಿದ ದೇವಸ್ಥಾನಗಳು (ನೋಡಿದ ಕ್ರಮದಲ್ಲಿ)

ಸ್ಥಳ
ದೇವರು
ನವಗ್ರಹ
ಪಂಚ ಭೂತ
ಅನ್ಯ
ದಿನ - ೨೧/೦೪/೨೦೦೯




ತಿರುಪ್ಪರನ್ಕುಂದ್ರಂ
ಮುರುಗ



ಪಜ್ಹಮುಥಿರ್ಚೋಲೈ
ಮುರುಗ



ಮದುರೈ
ಮೀನಾಕ್ಷಿ








ದಿನ - ೨೨/೦೪/೨೦೦೯




ತಿರುವನ್ನಕ್ಕಾವಲ್
ಜಮ್ಬುಕೇಶ್ವರ


ನೀರು
ತಿನ್ಗಲೂರ್
ಚಂದ್ರ



ಸ್ವಾಮಿಮಲೈ
ಮುರುಗ



ಪಾಪನಾಶಿನಿ
ಶಿವ








ದಿನ - ೨೩/೦೪/೨೦೦೯




ಅಲಂಗುಡಿ
ಗುರು



ತಿರುನಾಗೇಶ್ವರಂ
ರಾಹು



ಸುರ್ಯನರ್ಕೊಇಲ್
ರವಿ



ಕಂಜನೂರ್
ಶುಕ್ರ



ತಿರುನಲ್ಲಾರ್
ಶನಿ



ಕಿಜ್ಹಪೆರುಮ್ಬಲ್ಲಂ
ಕೇತು



ತಿರುವೆನ್ನ್ಕದು
ಬುಧ



ಪೂಮ್ಪುಹಾರ
ಶಿವ


ಸಮುದ್ರ ಸ್ನಾನ
ವೈಥಿಸ್ವರನ್ಕೊವಿಲ್
ಮಂಗಳ








ದಿನ - ೨೪/೦೪/೨೦೦೯




ಚಿದಂಬರಂ
ನಟರಾಜ


ಆಕಾಶ
ತಿರುವನ್ನಮಲೈ
ಅರುಣಾಚಲೇಶ್ವರ


ಅಗ್ನಿ
ಕಂಚಿಪುರಂ
ಕಾಮಾಕ್ಷಿ ದೇವಸ್ಥಾನ







ದಿನ - ೨೫/೦೪/೨೦೦೯




ಕಂಚಿಪುರಂ
ಏಕಾಂಬರ್ನಾಥರ

ಭೂಮಿ
ಶ್ರೀ ಕಾಳಹಸ್ತಿ
ಶ್ರೀ ಕಾಳಹಸ್ತೀಶ್ವರ


ವಾಯು

ಕೊನೆಯ ದೇವಸ್ಥಾನ ಮಾತ್ರ ಆಂಧ್ರದಲ್ಲಿ ಇದೆ. ಮೇಲಿರುವ ಬಹುತೇಕ ಅಂಶವನ್ನು ವಿಜಯ್ ಸಂಕಲಿಸಿದ್ದು; ನಾನದನ್ನು ಕೇವಲ ಮರು ಉಪಯೋಗಿಸಿಕೊಂಡಿದ್ದೇನೆ.

ಎಲ್ಲ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ಕಂಡದ್ದು - ನನಗೆ ಹಿಡಿಸಿದ್ದು:
1. ಪ್ರತಿಯೊಂದು ದೇವಸ್ಥಾನವು ಕೋಟೆಯಂತಿದೆ - ಸುತ್ತಿನೊಳಗೆ ಸುತ್ತು; ಸುತ್ತಿನೊಳಗೆ ಸುತ್ತು.
೨. ಪ್ರತಿಯೊಂದು ಸುತ್ತಿನಲ್ಲೂ ಹಲವಾರು ಚಿಕ್ಕ-ಚಿಕ್ಕ ದೇವಸ್ಥಾನಗಳು

೩. ಪೂಜಾರಿಗಳು ನೀಡುತ್ತಿದ್ದ ಕುಂಕುಮ / ವಿಭೂತಿ; ಆದರೆ ಶಿವ ಮೂಲ ದೇವರಾದ್ದರಿಂದ ಒಂದು ದೇವಸ್ಥಾನವನ್ನು ಬಿಟ್ಟರೆ ಬೇರೆಲ್ಲೂ ತೀರ್ಥ ದೊರೆಯಲಿಲ್ಲ ( ವಿಷ್ನು ದೇವಾಲಯದಲ್ಲಿಯ ತೀರ್ಥ-ಪಂಚಾಮೃತ ಬಹಳವಾಗಿ ಮಿಸ್ ಮಾಡಿಕೊಂಡೆ )
೪. ಕುಡಿಯುವ ನೀರಿನ ವ್ಯವಸ್ಥೆ
೫. ಒಳ್ಳೆಯ ತೆಂಗಿನ ಕಾಯಿಗಳು


ಎಲ್ಲ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ಕಂಡದ್ದು - ನನಗೆ ಹಿಡಿಸದೆ ಇದ್ದದ್ದು:
೧. ಎಲ್ಲೆಂದರಲ್ಲಿ ಎಣ್ಣೆ
೨. ಎಲ್ಲ ನಾಮಫಲಕಗಳು ತಮಿಳಿನಲ್ಲಿ - ರಾಷ್ಟ್ರ ಭಾಷೆಗೂ ಇಲ್ಲಿ ಆಸ್ಪದವಿಲ್ಲ
೩. ಸಂಕುಚಿತವಾದ, ಗಾಳಿಯಾಡದ ದೇವಸ್ಥಾನದ ಮಧ್ಯ ಭಾಗ; ಜನರು ಪೂಜೆಯ ಸಮಯದಲ್ಲಿ ವಿಚಿತ್ರ ಅನುಭವಗಳನ್ನು ಪಡೆಯುವುದು ಏತಕೆ ಎಂದು ಈಗ ನನಗೆ ಅರ್ಥವಾಗಿದೆ
೪. ಮುಗಿಬಿದ್ದು ಬರುವ ಜನರು (ದಾವಸ್ಥಾನ-ಅದನ್ನುಪಯೋಗಿಸುವ ಜನ-ಜಂಗುಳಿ; ಸಮತೋಲನ ಏರುಪೇರಾದಂತೆ ತೋರುತ್ತದೆ)
೫. ಜನರನ್ನು ಕುರಿಗಳಂತೆ ಹಿಂಡಿನಲ್ಲಿ ಓಡಿಸುವ ದೇವಸ್ಥಾನದ ಸಿಬ್ಬಂದಿಗಳು
೬. ತಟ್ಟೆಗೆ ದಕ್ಷಿಣೆಯನ್ನು ಹಾಕಿ ಎಂದು ಆಗ್ರಹಿಸುವ ಪೂಜಾರಿಗಳು; ಇದು ನನಗೆ ಅತ್ಯಂತ ಬೇಸರ ಉಂಟು ಮಾಡಿದ ಸಂಗತಿ - ಕೆಲವೊಮ್ಮೆ ತಲೆ ಕೆಟ್ಟವರಂತೆ ಗದರುವುದು (ಭಾಷೆ ತಿಳಿಯದೆ ನಮಗೆ ಏನಾಗುತ್ತಿದೆ ಎಂದು ತಿಳಿಯುತ್ತಿರಲಿಲ್ಲ)
೭. ಬೆನ್ನು ಬಿಡದೆ ಹಿಂಬಾಲಿಸಿಕೊಂಡು ಬರುವ ಭಿಕ್ಷುಕರು (ಆದರೆ ತಮ್ಮ ವ್ರತ್ತಿ ಧರ್ಮವನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿದ್ದು ಅವರೊಬ್ಬರೆ ಅನಿಸಿತು ನನಗೆ)
೮. ಕಾವೇರಿದ ಚಪ್ಪಡಿ ಕಲ್ಲುಗಳ ಮೇಲೆ ನಡೆದು ಪ್ರದಕ್ಷಿಣೆ ಹಾಕುವುದು
೯. ಬಾಳೆಯ ಹಣ್ಣಿನ / ತಿಂಡಿಯ / ಜೂಸ್ ಬಾಟಲಿಯ ಒಂದು ಝಲಕು ಸಿಕ್ಕರೂ ಸಾಕು - ಅಟ್ಟಿಸಿ ಕೊಂಡು ಬರುವ ವಾನರ ಜಾತಿಯ, ತೀಕ್ಷ್ಣ ಬುದ್ಧಿಯುಳ್ಳ ಬಾಲ ಸಹಿತವಾದ ಪ್ರಾಣಿಗಳು; ಜನರು ಅವುಗಳನ್ನು ಹಾಗೆಯೆ ಬಿಟ್ಟಿರುವುದು ನನಗೆ ಬೇಸರ ಉಂಟು ಮಾಡಿತು
೧೦. ಗಲೀಜು ಕೊಳಗಳು (ಪುಷ್ಕರಣಿ)


ಕೆಲವು ಮನಸ್ಸಿಗೆ ಮುದ ನೀಡಿದ ಕ್ಷಣಗಳು - ಒಳ್ಳೆಯ ಅನುಭವಗಳು:

೧. ಎಡೆ ಬಿಡದೆ ತಿರುಗಾಡಿದ್ದು
೨. ಬೆಳಗಿನ ಜಾವ ಬೇಗನೆ ಎದ್ದೇಳುವ ಅಭ್ಯಾಸ ಮಾಡಿಕೊಂಡದ್ದು
೩. ಸುಸ್ತಾಗಿ ಕಣ್ತುಂಬ ನಿದ್ದೆ ಮಾಡಿದ್ದು
೪. ಓಡುತ್ತಿರುವ ಬಸ್ಸಿನಲ್ಲಿ ನಿಂಬೆಯ ಹಣ್ಣಿನ ಶರ್ಬತ್ ಮಾಡಿದ್ದು
೫. ಮಾತನಾಡುತ್ತ ಮನೆ ಮಂದಿಯೊಡನೆ ಸಮಯ ಕಳೆದದ್ದು
೬. ದೊಡ್ದಮ್ಮ, ನಾನು ಪುಷ್ಕರಣಿಯಲ್ಲಿ ಪಾಚಿಯ ಮೇಲೆ ಕಾಲಿಟ್ಟು ಜಾರಿದಾಗ, ಕಿರುಚಿದ್ದು


ಒಟ್ಟಿನಲ್ಲಿ ಒಂದು ಒಳ್ಳೆಯ ಕಲಿಕೆಯಾಗಿತ್ತು. ಈಗ ನನ್ನಲ್ಲಿ ನಾನು ಸ್ವಲ್ಪ ಮಟ್ಟಿನ ಒಳ್ಳೆಯ ಬದಲಾವಣೆಯನ್ನು ಕಂಡಿದ್ದೇನೆ :) ಇನ್ನು ಮುಂದೆ ನಮ್ಮ ಕರ್ನಾಟಕದಲ್ಲೇ ಇರುವ ಬಹಳಷ್ಟು ಒಳ್ಳೆಯ ಪ್ರದೇಶಗಳನ್ನು ನೋಡುವುದಾಗಿ ನಿರ್ಧರಿಸಿದ್ದೇನೆ.

1 comment:

  1. ಕೊನೆಯ ಸಾಲು ಬಹಳ ಹಿಡಿಸಿತು :-)

    ReplyDelete