ಪ್ರದೇಶದಿಂದ ಪ್ರದೇಶಕ್ಕೆ ಕನ್ನಡ ಭಾಷೆಯಲ್ಲಿ ಬಹಳಷ್ಟು ವ್ಯತ್ಯಾಸ ಕಾಣಬಹುದು. ಇಂತಹದ್ದೊಂದು ಅಚ್ಚರಿಯ ಸಂಗತಿ ನಾನು ಚಿಕ್ಕವನಿದ್ದಾಗ ನಡೆದಿತ್ತು. ಬೇಸಿಗೆಯ ರಜೆಯ ಸಮಯ ಅಜ್ಜಿಯ ಮನೆಗೆ ಹೋಗುವುದೆಂದರೆ ವಿಜಯ ಹಾಗು ನನಗೆ ಬಹಳ ಸಂತಸದ ಸಂಗತಿ. ಅಮ್ಮ ನಮ್ಮಿಬ್ಬರನ್ನು ಧಾರವಾಡದಲ್ಲಿರುವ ಅಜ್ಜಿಯ ಮನೆಗೆ ಕರೆದೊಯ್ದು ಕೆಲ ದಿನ ಅಲ್ಲಿ ನಮ್ಮೊಡನೆ ಇದ್ದು ಹರಿಹರಕ್ಕೆ ಹಿಂದಿರುಗುವುದು ಸಾಮಾನ್ಯವಾಗಿತ್ತು. ಅಜ್ಜಿಯ ಮನೆಯಲ್ಲಿ ನಮ್ಮ ಅತ್ತೆ - ಮಾಮಾ ಜೊತೆ ಕಾಲ ಕಳೆಯಲು ಸಿಗುತ್ತಿದ್ದುದು ನಮಗೆ ಖುಷಿಯ ಸಂಗತಿಯಾಗಿತ್ತು. ಹೀಗೆ ಒಂದು ದಿನ ಅತ್ತೆಯೊಡನೆ ತರಕಾರಿ ಮಾರುಕಟ್ಟೆಗೆ ಹೋದಾಗ ಅತ್ತೆ ತರಕಾರಿ ಕೊಳ್ಳುತ್ತಿದ್ದನ್ನು ಗಮನಿಸುತ್ತಿದ್ದೆ...
ಅತ್ತೆ, ತರಕಾರಿ ಮಾರುವವಳನ್ನು ಕುರಿತು, "ಹಾಗಲ ಕಾಯಿ ಹ್ಯಾಗೆ?"
ತರಕಾರಿಯವಳು ಸುಮಾರು ೨೫ ~ ೩೦ ವರ್ಷ ವಯಸ್ಸಿನ ಹೆಂಗಸು. ಅದಕ್ಕವಳು, "ಎಷ್ಟು ಬೆಕಬೆ?", ಅಂದಳು.
ಇದನ್ನು ಕೇಳಿ ನನಗೆ ಏನು ಅರ್ಥವಾಗಲಿಲ್ಲ -ಆದರೆ ಯಾಕೋ ಅದು ವಿಚಿತ್ರ ಎನಿಸಿತು. ಹಾಗಲಕಾಯಿ ತುಟ್ಟಿಯಾಯಿತು ಎಂದು ಅತ್ತೆ ಮುನ್ನಡೆದರು.
ಬೇರೆಯ ತರಕಾರಿಯವಳನ್ನು ಕುರಿತು ಅತ್ತೆ, "ಹ್ಯಾಂಗ್ ಬೇ ಈ ಬೆಂಡೀಕಾಯ್?"
ತರಕಾರಿಯವಳು, "ಪಾವ್ ಕಿಲೋ ಯಾಡ್ ರುಪಾಯಿ"
ಅತ್ತೆ, "ಅರ್ಧ ಕಿಲೋ ಬೇಕ್ - ಹ್ಯಾಗ್ ಕೊಡ್ತಿ ?"
ತರಕಾರಿಯವಳು, "ನಾಲ್ಕು ರುಪಾಯಿಗೆ ಅರ್ಧ ತಗೋ ಬೇ"
ಅತ್ತೆ, "ಅರ್ಧ ಕಿಲೋ ಮೂರು ರೂಪಾಯಿ ಇಲ್ಲ?"
ತರಕಾರಿಯವಳು, "ತಗೋರಿ..."
ಸ್ವಲ್ಪ ಹೊತ್ತಿನಲ್ಲಿ ಪೂರ್ತಿ ಮಾರುಕಟ್ಟೆಯನ್ನು ಜಾಲಾಡಿ ಆಗಿತ್ತು. ಮನೆಗೆ ಮರಳಿದೆವು.
ಆಮೇಲೆ ಸ್ವಲ್ಪ ಧೈರ್ಯ ಮಾಡಿ ಅತ್ತೆಯನ್ನು ಕೇಳಿದೆ, "ಏನಬೆ... ಅಂತ ಅಂದ್ರೆ ಏನು?"
ನನ್ನ ವಿಚಾರ ಧಾರೆ ಯಾವೆಡೆ ಸಾಗುತ್ತಿದೆ ಎಂದು ಅರಿತ ಅವರು ಹೀಗೆಂದರು,"ಇಲ್ಲಿ ಅಬ್ಬೆ ಅಂದ್ರೆ ನಿಮ್ಮಲ್ಲಿ ಅಮ್ಮ ಅಂದ ಹಾಗೆ!"
ಸ್ವಲ್ಪ ಸಮಾಧಾನವಾಯಿತು - ಅಬ್ಬೆ ಅಂದ್ರೆ ನಾನು ಮೊದಲು ಅಂದುಕೊಂಡ ಹಾಗೆ ಬೈಗುಳ ಅಲ್ಲ ಅಂದು ಗೊತ್ತಾಗಿ.
ಕನ್ನಡ-ಹಿಂದಿ-ಇಂಗ್ಲಿಷ್ ಎಲ್ಲವನ್ನು ಮೊಸರುಬಜ್ಜಿ ಮಾಡಿದ ಹಾಗೆ ಕಲೆಸಿ ಮಾತಾಡುವ ಮಂದಿ ಅಕ್ಕ ಪಕ್ಕ ಇದ್ದಿದ್ದರಿಂದಲೋ ಏನೋ ನನಗೆ ಈ ಸಂದೇಹ ಬಂದಿದ್ದು.
Monday, December 21, 2009
Monday, December 14, 2009
ಅವನು ನಿನಗೆ ಗೊತ್ತಾ??
ನವೆಂಬೆರ್ - ಡಿಸೆಂಬರ್ ೨೦೦೭ ಇರಬೇಕು ಅದು... ಸರಿಯಾಗಿ ನೆನಪಿಲ್ಲ ಆದರೆ ರಜೆ ಇದ್ದ ಕಾರಣ ಮನೆಗೆ ಹೋಗುತ್ತಿದ್ದದ್ದು ನೆನಪಿದೆ. ಇಬ್ಬರು ಸಹಪಾಠಿಗಳು, ವಿಜಯ ಹಾಗು ನಾನು ಬೆಂಗಳೂರಿನ ಬಸ್ ತಂಗುದಾಣದಲ್ಲಿ ನಮ್ಮ ಬಸ್ಸು ಬರುವ ಹಾದಿಯನ್ನು ಕಾಯುತ್ತ ಕುಳಿತಿದ್ದೆವು. ಎಂದಿನಂತೆ, ಜನ ತುಂಬಿ ತುಳುಕಾಡುತ್ತಿದ್ದ ಆ ಜಾಗ ನನ್ನ ಕಣ್ಣುಗಳಿಗೆ ಏನು ಹೊಸತನ್ನು ತಂದಿರಲಿಲ್ಲ. ಅಷ್ಟರಲ್ಲಿ ನಮ್ಮ ಬಸ್ಸು ಬಂದೇ ಬಿಟ್ಟಿತು. ಬೇಸರ ಕಳೆದು ಈಗ ಸುಮ್ಮನೆ ಮಲಗಬಹುದು ಅಂದುಕೊಂಡು ಬಸ್ಸು ಹತ್ತಲು ಅಣಿಯಾದೆ. ಅಷ್ಟರಲ್ಲಿ ನಡೆದ ಈ ಘಟನೆ ನನಗೆ ಅಚ್ಕಾರಿಯನ್ನು ಮೂಡಿಸಿತು.
ಬಸ್ಸು ಹತ್ತಲು ನಾನು ಹೋಗುತ್ತಿದಂತೆ ನನ್ನ ಮುಂದೆ ನಡೆಯುತ್ತಿದ್ದ ನನ್ನ ಸಹಪಾಠಿಯನ್ನು ನನ್ನ ಪಕ್ಕದಲ್ಲಿಯೇ ನಡೆದುಕೊಂಡು ಬರುತ್ತಿದ್ದ ಹುಡುಗನೊಬ್ಬ ಮಾತನಾಡಿಸಿದ. ಮಾತು-ಕಥೆ ಹೀಗೆ ನಡೆಯಿತು...
ಅವನಂದ, "ಒಹ್! ನೀವು !@# ಹೈಸ್ಕೂಲಿನಲ್ಲಿ ಓದಿದ್ದು ಅಲ್ವಾ? ನಾನು ಶ್ರೀನಿವಾಸ... ನೆನಪಿದೆ ನಾ? ನಾನು ಅದೇ ಹೈಸ್ಕೂಲಿನಲ್ಲಿ ಓದಿದ್ದು . ನಿಮ್ಮದೇ ಬ್ಯಾಚು... ನೀವು @#& ಅಲ್ಲ?"
ಅವಳು (ಮುಖದಲ್ಲಿ ಮುಗುಳ್ನಗು... ಬಹಳ ಪರಿಚಯದವರನ್ನು ಮಾತನಾಡಿಸುವಂತೆ),"ಹೌದು. ನೀವು ಹೇಗಿದ್ದೀರಾ? ..."
ಅದಕ್ಕವನು, "ನಾನು ಚೆನ್ನಾಗಿದ್ದೀನಿ... ನೀವು ಎಲ್ಲಿ ಕೆಲ್ಸಾ ಮಾಡ್ತಿದ್ದೀರ? "
"ನಾನು *&%$#@ಯಲ್ಲಿ ಹೋದ ತಿಂಗಳು ಸೇರಿಕೊಂಡೆ..."
"ಎಲ್ಲಿ.. ದಾವಣಗೆರೆಗೆ ಹೊರಟಿದ್ದೀರಾ?"
"ಹೌದು... ನೀವು?"
.....
ಮಾತು ಸುಮಾರು ೧೦ ನಿಮಿಷ ನಡೆಯಿತು.. ಅಷ್ಟರಲ್ಲಿ ನಾನು ಬಸ್ಸನ್ನೇರಿ, ನನ್ನ ಜಾಗವನ್ನು ಹುಡುಕಿಕೊಂಡು ಮಲಗಲು ಅಣಿಯಾದೆ... ಸ್ವಲ್ಪ ಸಮಯದ ನಂತರ ಅವಳು ನನ್ನ ಎದುರಿನ ಸೀಟಿನ ಮೇಲೆ ಕುಳಿತಾಗ ಕೇಳಿದೆ,"ನಿನಗೆ ಅವನು ಗೊತ್ತಿದ್ದಾನೇನೆ?"
ಅದಕ್ಕವಳು, "ಇಲ್ಲ! ಅವನು ಯಾರು ಅಂತಾ ನನಗೆ ಗೊತ್ತಿಲ್ಲ!", ಅನ್ನಬೇಕೆ?
ನಾನು, "ಗೊತ್ತಿಲ್ಲವಾ? ಮತ್ತೆ ಇಷ್ಟು ಹೊತ್ತು ಪೂರ್ತಿ ಪಿರಿಚಯದವರಂತೆ ಮಾತನಾಡಿಸಿದೆ?"
ಅವಳು, "ಇಲ್ಲಪ್ಪ... ಅವನು ಅಷ್ಟು ನೆನಪಿಸಿಕೊಂಡು ನನ್ನನ್ನು ಗುರುತಿಸಿದ... ಆದರೆ ನನಗೆ ಅವನ್ಯಾರು ಅಂತ ನೆನಪಿಲ್ಲ... ಪಾಪ ಬೇಜಾರು ಮಾಡ್ಕೋತಾನೆ ಅಂತ ಮಾತಾಡ್ಸಿದೆ..", ಅಂದಳು.
ನನಗೆ ಇನ್ನೂ ಅರ್ಥವಾಗದ ವಿಷಯವಿದು - ಅಪರಿಚಿತರು ಬಂದು ನಾನು ಇಂಥವನು ಅಂತ ನನಗ್ಯಾರಾದರು ಹೇಳಿದ್ದಿದ್ದರೆ, ನನಗೆ ನೆನಪಿಲ್ಲದ ಪಕ್ಷದಲ್ಲಿ ನಾನು "ನೀವು ಯಾರು ಅಂತ ನನಗೆ ನೆನಪು ಬರುತ್ತಿಲ್ಲ" ಅಂದು ಬಿಡುತ್ತಿದ್ದನೇನೋ...
ಬಸ್ಸು ಹತ್ತಲು ನಾನು ಹೋಗುತ್ತಿದಂತೆ ನನ್ನ ಮುಂದೆ ನಡೆಯುತ್ತಿದ್ದ ನನ್ನ ಸಹಪಾಠಿಯನ್ನು ನನ್ನ ಪಕ್ಕದಲ್ಲಿಯೇ ನಡೆದುಕೊಂಡು ಬರುತ್ತಿದ್ದ ಹುಡುಗನೊಬ್ಬ ಮಾತನಾಡಿಸಿದ. ಮಾತು-ಕಥೆ ಹೀಗೆ ನಡೆಯಿತು...
ಅವನಂದ, "ಒಹ್! ನೀವು !@# ಹೈಸ್ಕೂಲಿನಲ್ಲಿ ಓದಿದ್ದು ಅಲ್ವಾ? ನಾನು ಶ್ರೀನಿವಾಸ... ನೆನಪಿದೆ ನಾ? ನಾನು ಅದೇ ಹೈಸ್ಕೂಲಿನಲ್ಲಿ ಓದಿದ್ದು . ನಿಮ್ಮದೇ ಬ್ಯಾಚು... ನೀವು @#& ಅಲ್ಲ?"
ಅವಳು (ಮುಖದಲ್ಲಿ ಮುಗುಳ್ನಗು... ಬಹಳ ಪರಿಚಯದವರನ್ನು ಮಾತನಾಡಿಸುವಂತೆ),"ಹೌದು. ನೀವು ಹೇಗಿದ್ದೀರಾ? ..."
ಅದಕ್ಕವನು, "ನಾನು ಚೆನ್ನಾಗಿದ್ದೀನಿ... ನೀವು ಎಲ್ಲಿ ಕೆಲ್ಸಾ ಮಾಡ್ತಿದ್ದೀರ? "
"ನಾನು *&%$#@ಯಲ್ಲಿ ಹೋದ ತಿಂಗಳು ಸೇರಿಕೊಂಡೆ..."
"ಎಲ್ಲಿ.. ದಾವಣಗೆರೆಗೆ ಹೊರಟಿದ್ದೀರಾ?"
"ಹೌದು... ನೀವು?"
.....
ಮಾತು ಸುಮಾರು ೧೦ ನಿಮಿಷ ನಡೆಯಿತು.. ಅಷ್ಟರಲ್ಲಿ ನಾನು ಬಸ್ಸನ್ನೇರಿ, ನನ್ನ ಜಾಗವನ್ನು ಹುಡುಕಿಕೊಂಡು ಮಲಗಲು ಅಣಿಯಾದೆ... ಸ್ವಲ್ಪ ಸಮಯದ ನಂತರ ಅವಳು ನನ್ನ ಎದುರಿನ ಸೀಟಿನ ಮೇಲೆ ಕುಳಿತಾಗ ಕೇಳಿದೆ,"ನಿನಗೆ ಅವನು ಗೊತ್ತಿದ್ದಾನೇನೆ?"
ಅದಕ್ಕವಳು, "ಇಲ್ಲ! ಅವನು ಯಾರು ಅಂತಾ ನನಗೆ ಗೊತ್ತಿಲ್ಲ!", ಅನ್ನಬೇಕೆ?
ನಾನು, "ಗೊತ್ತಿಲ್ಲವಾ? ಮತ್ತೆ ಇಷ್ಟು ಹೊತ್ತು ಪೂರ್ತಿ ಪಿರಿಚಯದವರಂತೆ ಮಾತನಾಡಿಸಿದೆ?"
ಅವಳು, "ಇಲ್ಲಪ್ಪ... ಅವನು ಅಷ್ಟು ನೆನಪಿಸಿಕೊಂಡು ನನ್ನನ್ನು ಗುರುತಿಸಿದ... ಆದರೆ ನನಗೆ ಅವನ್ಯಾರು ಅಂತ ನೆನಪಿಲ್ಲ... ಪಾಪ ಬೇಜಾರು ಮಾಡ್ಕೋತಾನೆ ಅಂತ ಮಾತಾಡ್ಸಿದೆ..", ಅಂದಳು.
ನನಗೆ ಇನ್ನೂ ಅರ್ಥವಾಗದ ವಿಷಯವಿದು - ಅಪರಿಚಿತರು ಬಂದು ನಾನು ಇಂಥವನು ಅಂತ ನನಗ್ಯಾರಾದರು ಹೇಳಿದ್ದಿದ್ದರೆ, ನನಗೆ ನೆನಪಿಲ್ಲದ ಪಕ್ಷದಲ್ಲಿ ನಾನು "ನೀವು ಯಾರು ಅಂತ ನನಗೆ ನೆನಪು ಬರುತ್ತಿಲ್ಲ" ಅಂದು ಬಿಡುತ್ತಿದ್ದನೇನೋ...
Friday, December 4, 2009
ಅಡ್ಜಸ್ಟ್ ಮಾಡ್ಕೊಳ್ಳಿ ಸಾರ್!
ಹಬ್ಬದ ಸಮಯದಲ್ಲಿ ಕರ್ನಾಟಕ ಸಾರಿಗೆಯಲ್ಲಿ ಮುಂಗಡ ಆಸನಗಳನ್ನು ಕಾಯ್ದಿರಿಸಿ ಆ ಆಸನಗಳಲ್ಲಿ ಸುಖವಾಗಿ ಕೂತು ನೀವು ಹೋಗುವುದಾಗಿ ಕನಸು ಕಾಣುತಿದ್ದ ಪಕ್ಷದಲ್ಲಿ, ಎದ್ದೇಳಿ!
೧೬-ನವಂಬರ್-೨೦೦೯-ದೀಪಾವಳಿ ಹಬ್ಬದ ಸಮಯ. ವಿಜಯ ಹಾಗು ನಾನು ಹರಿಹರಕ್ಕೆ ಹೋಗುವ ಬಸ್ಸಿಗೆ ಕಾಯುತ್ತಿದ್ದೆವು - ಎಲ್ಲೆಡೆ ಜನಜಾತ್ರೆ. ನಮ್ಮನ್ನು ಹರಿಹರಕ್ಕೆ ಕರೆದೊಯ್ಯುವ ಕರ್ನಾಟಕ ಸಾರಿಗೆ ಬಸ್ಸು ಸುಮಾರು ೧ ಘಂಟೆ ತಡವಾಗಿ ಬಂದಿತು. ಮುಂಚಿತವಾಗಿ ಎರಡು ಆಸನಗಳನ್ನು ನಾವು ಕಾಯ್ದಿರಿಸಿದ್ದರಿಂದ ನಮ್ಮ ಪ್ರಯಾಣ ಸುಗಮವಾಗಿ ಆಗುವುದೆಂಬ ನಂಬಿಕೆ ನನ್ನದಾಗಿತ್ತು. ಬಸ್ಸು ತನ್ನ ಸಾಮಾನ್ಯ ಜಾಗಕ್ಕೆ ಹೋಗಿ ನಿಲ್ಲದೆ, ರಸ್ತೆಯ ಮಧ್ಯದಲ್ಲಿ ನಿಂತಿದ್ದರಿಂದ ಅದನ್ನು ಗುರುತಿಸಿ ಹತ್ತುವುದು ತುಸು ಕಷ್ಟವೇ ಆಯಿತು. ಹೇಗೋ ಮಾಡಿ ಬಸ್ಸನ್ನು ಹತ್ತಿದೆವು - ಶುರುವಾಯಿತು ನಮ್ಮ ಕಠಿಣಪರೀಕ್ಷೆ.
ಪೂರ್ತಿಯಾಗಿ ಕಾಯ್ದಿರಿಸಲ್ಪಟ್ಟ ಈ ಬಸ್ಸು ಆಗ ತಾನೆ ಬಂದಿದ್ದು, ತುಂಬಿ ತುಳುಕಾಡುತ್ತಿದ್ದನ್ನು ಕಂಡು ನನಗೆ ಸ್ವಲ್ಪ ಆಶ್ಚರ್ಯವಾಯಿತು. ಟಿಕೇಟನ್ನು ತಗೆದು ಸೀಟ್ ನಂಬರ್ ಹುಡುಕತೊಡಗಿದ ವಿಜಯನಿಗೆ ಇನ್ನೊಂದು ಅಚ್ಚರಿ ಕಾದಿತ್ತು - ಆ ಬಸ್ಸಿನಲ್ಲಿ ಇದ್ದ ಸೀಟುಗಳ ವಿನ್ಯಾಸ ನಾವು ಕಾಯ್ದಿರಿಸಿದ್ದ ವಿನ್ಯಾಸಕ್ಕೆ ಹೋಲುತ್ತಿರಲಿಲ್ಲ. ಅದರ ಪರಿಣಾಮವಾಗಿ ಹಲವಾರು ಮುಂಗಡ ಸೀಟ್ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ (ವಿಶೇಷವಾಗಿ ಆಜು-ಬಾಜು ಸೀಟು ಪಡೆಯಬೇಕಾದವರಿಗೆ - ನಮ್ಮನೂ ಸೇರಿಸಿ) ತೊಂದರೆ ಖಚಿತವಾಗಿತ್ತು. ಆದರೂ ಇಷ್ಟು ಜನ ಆ ಬಸ್ಸಿನಲ್ಲಿ ಇದ್ದದ್ದನ್ನು ನೋಡಿ ಸ್ವಲ್ಪ ದಿಗಿಲೇ ಆಯಿತು.
ದೀಪಾವಳಿಯ ಹಬ್ಬಕ್ಕೆ ಊರಿಗೆ ಹೋಗಬೇಕು ಅಂತ ನಾನು ಹಾಗು ವಿಜಯ ಒಂದು ತಿಂಗಳು ಮೊದಲೇ ವಿಚಾರ ಮಾಡಿದ್ದರೂ, ಪ್ರಯಾಣಕ್ಕೆ ಬೇಕಾದ ಟಿಕೆಟ್ ಗಳನ್ನ ಮುಂಚಿತವಾಗಿ ಕಾಯ್ದಿರಿಸುವುದನ್ನು ಮರೆತಿದ್ದೆವು (ಮರೆತಿದ್ದೆವು ಅನ್ನುವುದಕ್ಕಿಂತ, ಆಲಸ್ಯದಿಂದ "ಮಾಡಿದರಾಯಿತು ಬಿಡು!" ಎಂದು ಸುಮ್ಮನಿದ್ದೆವು). ಏರಾವತ, ರಾಜಹಂಸ ಬಸ್ಸುಗಳು ಸಿಗದೆ, ಇದ್ದ ಕೆಲವೇ ಕರ್ನಾಟಕ ಸಾರಿಗೆ ಬಸ್ಸೊಂದರಲ್ಲಿ ಸೀಟನ್ನು ಕಾಯ್ದಿರಿಸಿದ್ದೆವು.
ಕಂಡಕ್ಟರ್ ಸಾಹೇಬರು ನಮ್ಮ ಟಿಕೇಟನ್ನು ಪರಿಶೀಲಿಸಿ ನಮ್ಮನು ನಮ್ಮ 'ಹೊಸ' ಆಸನಗಳತ್ತ ಕೂರಲು ಹೇಳಿದನು. ಕೂತುಕೊಂಡದ್ದಾಯಿತು. ಆದರೆ ನಮ್ಮ ಸಾಮಾನನ್ನು ಇಡುವುದು ಎಲ್ಲಿ? ಕಣ್ಣನ್ನು ಮೇಲೆ ಹಾಯಿಸಿದರೆ ಎಲ್ಲೂ ಜಾಗ ಕಾಣುತ್ತಿಲ್ಲ! ಅಲ್ಲಿ-ಇಲ್ಲಿ ಎಂದು ಸ್ವಲ್ಪ ಜಾಗ ಮಾಡಿ ಸಾಮಾನು ತುರುಕಿದ್ದಾಯಿತು. ಇನ್ನೇನು ಮಲಗುವುದು ಅನ್ನುವಷ್ಟರಲ್ಲಿ ಗೊತ್ತಾಯಿತು - ಬಸ್ಸು ತುಂಬಿತ್ತು ಆದರೆ ಆದರಿಲ್ಲಿ ಇದ್ದ ಅರ್ಧಕ್ಕರ್ಧ ಜನ ಕಾಯ್ದಿರಿಸಿದ ಆಸನಗಳ ಮೇಲೆ ಕಾಯ್ದಿರಿಸಿದ ತಿಕೆಟಿಲ್ಲದೆ ಕೂತಿದ್ದರು. ಸರಿಯಾದ ಟಿಕೇಟು ಉಳ್ಳವರು ಬಸ್ಸು ಹತ್ತಲು ಹೊಡೆದಾಡುತ್ತಿದ್ದರು! ಸ್ವಲ್ಪ ಸಮಯದಲ್ಲಿ ಬಸ್ಸು ಜನರಿಂದ ತುಂಬಿ ಹೋಯಿತು. ನನಗೆ ಕೂರಲು ಸಹ ಕಷ್ಟವಾಗಿತ್ತು. ಜನರು ಮೈಗೆ ಮೈ ತಿಕ್ಕಿ, ನಿರಂತರವಾಗಿ ಅಲುಗಾಡುತ್ತಿದ್ದುದರಿಂದ ನಿದ್ದೆ ಎಂಬುದು ಕನಸಾಗಿ ಬಿಟ್ಟಿತ್ತು. ಕಂಡಕ್ಟರ್ ಹಾಗು ಜನರ ಮಾತು-ಕಥೆ ಹೀಗೆ ನಡೆಯಿತು (ಇಲ್ಲಿ ಸರಿಯಾದ ಮುಂಗಡ ಟಿಕೇಟು ಪಡೆದ ಪ್ರಯಾಣಿಕರನ್ನು 'ಸ-ಪ್ರಯಾಣಿಕ' ಹಾಗು ಅನ್ಯ ಪ್ರಯಾಣಿಕರನ್ನು 'ತ-ಪ್ರಯಾಣಿಕ' ಎಂದು ಕರೆದಿದ್ದೇನೆ) :
ಒಬ್ಬ ಸ-ಪ್ರಯಾಣಿಕ ಕಂಡಕ್ಟರ್ ಅನ್ನು ಕುರಿತು, "ರೀ, ಕಂಡಕ್ಟರ್! ನಂಗೆ ಕೂಡೋಕ್ಕೆ ಆಗ್ತಿಲ್ಲ - ಸೀಟು ಮುರಿದು ಹೋಗಿದೆ!"
ಅದಕ್ಕೆ ಕಂಡಕ್ಟರ್,"ಸಾರ್, ಡಿಪೋದವರು ಈ ಬಸ್ಸ ಬಿಟ್ಯಾರ್ ರೀ... ನಾ ಏನ್ ಮಾಡ್ಲಿ ? ಇದು ಎಕ್ಸ್-ಟ್ರಾ ಬಸ್ಸ ರೀ - ಆದ್ರೂ ಸಾಕಾಗಂಗಿಲ್ಲ ರೀ"
ಇನ್ನೊಬ್ಬ ಸ-ಪ್ರಯಾಣಿಕ,"ನೀವು ಅನ್-ರಿಜರ್ವಡ್ ಜನರನ್ನ ಯಾಕೆ ಒಳಗೆ ಬಿಟ್ಕೊಂಡ್ರಿ??"
ಕಂಡಕ್ಟರ್,"ಏನ್ ಮಾಡಲ್ ರೀ ನಾನು? ಜನಾ ಭಾಳ ಇದ್ದಾರೆ ಬಸ್ಸುಗಳು ಸಾಕಾಗ್ತಿಲ್ಲ. ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಸಾರ್!"
ತ-ಪ್ರಯಾಣಿಕಳೊಬ್ಬಳು ಸಣ್ಣ ಮಗುವೊಂದನ್ನು ಹಿಡಿದುಕೊಂದು ಬಸ್ಸು ಬಿಡುವಸ್ಟರಲ್ಲಿ ಹತ್ತಿದ್ದಳು - ಕಂಡಕ್ಟರ್ ಸಾಹೇಬರು ಮೊದಲೇ "ಇಲ್ಲಿ ಸೀಟು ಇಲ್ಲ!" ಎಂದು ಹೇಳಿದ್ದರೂ, "ನೋಡಿ ಸ್ವಾಮಿ... ಮಗು ಇದೆ ಜೊತೆಯಲ್ಲಿ"... ಎಂದು ಆರ್ತನಾದ ಹಾಡತೊಡಗಿದಳು.
ಸ-ಪ್ರಯಾಣಿಕರೊಬ್ಬರು ತಮ್ಮ ಲಗೇಜು ಇಡಲು ಜಾಗವಿಲ್ಲದೆ ತ-ಪ್ರಯಾಣಿಕರೊಬ್ಬರ ಲಗೇಜನ್ನು ಸ್ವಲ್ಪ ಸರಿಸಲು ಹೋದಾಗ ತ-ಪ್ರಯಾಣಿಕರು ಕುಂಡಿ-ಕೊಯ್ದ ಹಂದಿಯಂತೆ ಅರಚಾಡಿದರು. ಕಂಡಕ್ಟರ್ ಮೂಕ ಪ್ರೇಕ್ಷಕರಾಗಿ ಉಳಿದು ಬಿಟ್ಟಿದ್ದರು.
ತ-ಪ್ರಯಾಣಿಕರಿಗೆ ಹೀಗೆ ಪ್ರಯಾಣ ಮಾಡಿ ಅಭ್ಯಾಸ ನೋಡಿ. ತಮ್ಮ ಕೈಲಿದ್ದ ಚೀನಾ ಮೊಬೈಲನ್ನು ಜೋರಾಗಿ ಬೇನಾಮಿ ಹಾಡೊಂದನ್ನು ಅರಚಲು ಬಿಟ್ಟು ಜೋರಾಗಿ ಲೋಕಾಭಿರಾಮದ ಮಾತುಗಳನ್ನು ಮಾತನಾಡಲು ಪ್ರಾರಂಭಿಸಿದರು.
ತ-ಪ್ರಯಾಣಿಕರಿಗೆ ತಾವು ಕಳೆದುಕೊಳ್ಳೋದು ಏನೂ ಇರಲಿಲ್ಲ. ಸ-ಪ್ರಯಾಣಿಕರಿಗೆ ಸರಿಯಾಗಿ ಸೀಟು ಸಿಗದೇ, ನಿದ್ದೆ ಇಲ್ಲದೆ ಹೆಚ್ಚು ದುಡ್ಡು ಕೊಟ್ಟು ಟಿಕೇಟು ಪಡೆದು ಹುಚ್ಚರಾದೆವು ಅನ್ನೋದು ಖಾತ್ರಿಯಾಯಿತು. ಕಂಡಕ್ಟರ್ ಸಾಹೇಬರು ನಿಂತು ಪ್ರಯಾಣ ಮಾಡಿದರು.
ಇದೆಲ್ಲ ಹೀಗೆ ಯಾಕಾಯಿತು ಅಂತ ಸ್ವಲ್ಪ ಸಮಯ ವಿಚಾರ ಮಾಡಿದೆ -
೧. ಬೆಂಗಳೂರಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಜನ ಇದ್ದಾರೆ
೨. ಜನರಿಗೆ 'ನಾನು-ಇವನ-ತಲೆ-ತುಳಿದರು-ಪರವಾಗಿಲ್ಲ" ಅನ್ನೋ ಭಾವನೆ
೩. ಸರಿಯಾದ ಸಮಯಕ್ಕೆ ಟಿಕೇಟು ಪಡೆಯದ ನಮ್ಮಂತಹ ಪ್ರಯಾಣಿಕರು
ಏನೇ ಹೇಳಿ, ಕರ್ನಾಟ ಸಾರಿಗೆ ಬಸ್ಸಿನಲ್ಲಿ ಹಬ್ಬದ ಸಮಯದಲ್ಲಿ ರಾತ್ರಿಯ ಪ್ರಯಾಣ ನರಕವಾಗೋದು ಬಹುತೇಕ ಸತ್ಯ!
೧೬-ನವಂಬರ್-೨೦೦೯-ದೀಪಾವಳಿ ಹಬ್ಬದ ಸಮಯ. ವಿಜಯ ಹಾಗು ನಾನು ಹರಿಹರಕ್ಕೆ ಹೋಗುವ ಬಸ್ಸಿಗೆ ಕಾಯುತ್ತಿದ್ದೆವು - ಎಲ್ಲೆಡೆ ಜನಜಾತ್ರೆ. ನಮ್ಮನ್ನು ಹರಿಹರಕ್ಕೆ ಕರೆದೊಯ್ಯುವ ಕರ್ನಾಟಕ ಸಾರಿಗೆ ಬಸ್ಸು ಸುಮಾರು ೧ ಘಂಟೆ ತಡವಾಗಿ ಬಂದಿತು. ಮುಂಚಿತವಾಗಿ ಎರಡು ಆಸನಗಳನ್ನು ನಾವು ಕಾಯ್ದಿರಿಸಿದ್ದರಿಂದ ನಮ್ಮ ಪ್ರಯಾಣ ಸುಗಮವಾಗಿ ಆಗುವುದೆಂಬ ನಂಬಿಕೆ ನನ್ನದಾಗಿತ್ತು. ಬಸ್ಸು ತನ್ನ ಸಾಮಾನ್ಯ ಜಾಗಕ್ಕೆ ಹೋಗಿ ನಿಲ್ಲದೆ, ರಸ್ತೆಯ ಮಧ್ಯದಲ್ಲಿ ನಿಂತಿದ್ದರಿಂದ ಅದನ್ನು ಗುರುತಿಸಿ ಹತ್ತುವುದು ತುಸು ಕಷ್ಟವೇ ಆಯಿತು. ಹೇಗೋ ಮಾಡಿ ಬಸ್ಸನ್ನು ಹತ್ತಿದೆವು - ಶುರುವಾಯಿತು ನಮ್ಮ ಕಠಿಣಪರೀಕ್ಷೆ.
ಪೂರ್ತಿಯಾಗಿ ಕಾಯ್ದಿರಿಸಲ್ಪಟ್ಟ ಈ ಬಸ್ಸು ಆಗ ತಾನೆ ಬಂದಿದ್ದು, ತುಂಬಿ ತುಳುಕಾಡುತ್ತಿದ್ದನ್ನು ಕಂಡು ನನಗೆ ಸ್ವಲ್ಪ ಆಶ್ಚರ್ಯವಾಯಿತು. ಟಿಕೇಟನ್ನು ತಗೆದು ಸೀಟ್ ನಂಬರ್ ಹುಡುಕತೊಡಗಿದ ವಿಜಯನಿಗೆ ಇನ್ನೊಂದು ಅಚ್ಚರಿ ಕಾದಿತ್ತು - ಆ ಬಸ್ಸಿನಲ್ಲಿ ಇದ್ದ ಸೀಟುಗಳ ವಿನ್ಯಾಸ ನಾವು ಕಾಯ್ದಿರಿಸಿದ್ದ ವಿನ್ಯಾಸಕ್ಕೆ ಹೋಲುತ್ತಿರಲಿಲ್ಲ. ಅದರ ಪರಿಣಾಮವಾಗಿ ಹಲವಾರು ಮುಂಗಡ ಸೀಟ್ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ (ವಿಶೇಷವಾಗಿ ಆಜು-ಬಾಜು ಸೀಟು ಪಡೆಯಬೇಕಾದವರಿಗೆ - ನಮ್ಮನೂ ಸೇರಿಸಿ) ತೊಂದರೆ ಖಚಿತವಾಗಿತ್ತು. ಆದರೂ ಇಷ್ಟು ಜನ ಆ ಬಸ್ಸಿನಲ್ಲಿ ಇದ್ದದ್ದನ್ನು ನೋಡಿ ಸ್ವಲ್ಪ ದಿಗಿಲೇ ಆಯಿತು.
ದೀಪಾವಳಿಯ ಹಬ್ಬಕ್ಕೆ ಊರಿಗೆ ಹೋಗಬೇಕು ಅಂತ ನಾನು ಹಾಗು ವಿಜಯ ಒಂದು ತಿಂಗಳು ಮೊದಲೇ ವಿಚಾರ ಮಾಡಿದ್ದರೂ, ಪ್ರಯಾಣಕ್ಕೆ ಬೇಕಾದ ಟಿಕೆಟ್ ಗಳನ್ನ ಮುಂಚಿತವಾಗಿ ಕಾಯ್ದಿರಿಸುವುದನ್ನು ಮರೆತಿದ್ದೆವು (ಮರೆತಿದ್ದೆವು ಅನ್ನುವುದಕ್ಕಿಂತ, ಆಲಸ್ಯದಿಂದ "ಮಾಡಿದರಾಯಿತು ಬಿಡು!" ಎಂದು ಸುಮ್ಮನಿದ್ದೆವು). ಏರಾವತ, ರಾಜಹಂಸ ಬಸ್ಸುಗಳು ಸಿಗದೆ, ಇದ್ದ ಕೆಲವೇ ಕರ್ನಾಟಕ ಸಾರಿಗೆ ಬಸ್ಸೊಂದರಲ್ಲಿ ಸೀಟನ್ನು ಕಾಯ್ದಿರಿಸಿದ್ದೆವು.
ಕಂಡಕ್ಟರ್ ಸಾಹೇಬರು ನಮ್ಮ ಟಿಕೇಟನ್ನು ಪರಿಶೀಲಿಸಿ ನಮ್ಮನು ನಮ್ಮ 'ಹೊಸ' ಆಸನಗಳತ್ತ ಕೂರಲು ಹೇಳಿದನು. ಕೂತುಕೊಂಡದ್ದಾಯಿತು. ಆದರೆ ನಮ್ಮ ಸಾಮಾನನ್ನು ಇಡುವುದು ಎಲ್ಲಿ? ಕಣ್ಣನ್ನು ಮೇಲೆ ಹಾಯಿಸಿದರೆ ಎಲ್ಲೂ ಜಾಗ ಕಾಣುತ್ತಿಲ್ಲ! ಅಲ್ಲಿ-ಇಲ್ಲಿ ಎಂದು ಸ್ವಲ್ಪ ಜಾಗ ಮಾಡಿ ಸಾಮಾನು ತುರುಕಿದ್ದಾಯಿತು. ಇನ್ನೇನು ಮಲಗುವುದು ಅನ್ನುವಷ್ಟರಲ್ಲಿ ಗೊತ್ತಾಯಿತು - ಬಸ್ಸು ತುಂಬಿತ್ತು ಆದರೆ ಆದರಿಲ್ಲಿ ಇದ್ದ ಅರ್ಧಕ್ಕರ್ಧ ಜನ ಕಾಯ್ದಿರಿಸಿದ ಆಸನಗಳ ಮೇಲೆ ಕಾಯ್ದಿರಿಸಿದ ತಿಕೆಟಿಲ್ಲದೆ ಕೂತಿದ್ದರು. ಸರಿಯಾದ ಟಿಕೇಟು ಉಳ್ಳವರು ಬಸ್ಸು ಹತ್ತಲು ಹೊಡೆದಾಡುತ್ತಿದ್ದರು! ಸ್ವಲ್ಪ ಸಮಯದಲ್ಲಿ ಬಸ್ಸು ಜನರಿಂದ ತುಂಬಿ ಹೋಯಿತು. ನನಗೆ ಕೂರಲು ಸಹ ಕಷ್ಟವಾಗಿತ್ತು. ಜನರು ಮೈಗೆ ಮೈ ತಿಕ್ಕಿ, ನಿರಂತರವಾಗಿ ಅಲುಗಾಡುತ್ತಿದ್ದುದರಿಂದ ನಿದ್ದೆ ಎಂಬುದು ಕನಸಾಗಿ ಬಿಟ್ಟಿತ್ತು. ಕಂಡಕ್ಟರ್ ಹಾಗು ಜನರ ಮಾತು-ಕಥೆ ಹೀಗೆ ನಡೆಯಿತು (ಇಲ್ಲಿ ಸರಿಯಾದ ಮುಂಗಡ ಟಿಕೇಟು ಪಡೆದ ಪ್ರಯಾಣಿಕರನ್ನು 'ಸ-ಪ್ರಯಾಣಿಕ' ಹಾಗು ಅನ್ಯ ಪ್ರಯಾಣಿಕರನ್ನು 'ತ-ಪ್ರಯಾಣಿಕ' ಎಂದು ಕರೆದಿದ್ದೇನೆ) :
ಒಬ್ಬ ಸ-ಪ್ರಯಾಣಿಕ ಕಂಡಕ್ಟರ್ ಅನ್ನು ಕುರಿತು, "ರೀ, ಕಂಡಕ್ಟರ್! ನಂಗೆ ಕೂಡೋಕ್ಕೆ ಆಗ್ತಿಲ್ಲ - ಸೀಟು ಮುರಿದು ಹೋಗಿದೆ!"
ಅದಕ್ಕೆ ಕಂಡಕ್ಟರ್,"ಸಾರ್, ಡಿಪೋದವರು ಈ ಬಸ್ಸ ಬಿಟ್ಯಾರ್ ರೀ... ನಾ ಏನ್ ಮಾಡ್ಲಿ ? ಇದು ಎಕ್ಸ್-ಟ್ರಾ ಬಸ್ಸ ರೀ - ಆದ್ರೂ ಸಾಕಾಗಂಗಿಲ್ಲ ರೀ"
ಇನ್ನೊಬ್ಬ ಸ-ಪ್ರಯಾಣಿಕ,"ನೀವು ಅನ್-ರಿಜರ್ವಡ್ ಜನರನ್ನ ಯಾಕೆ ಒಳಗೆ ಬಿಟ್ಕೊಂಡ್ರಿ??"
ಕಂಡಕ್ಟರ್,"ಏನ್ ಮಾಡಲ್ ರೀ ನಾನು? ಜನಾ ಭಾಳ ಇದ್ದಾರೆ ಬಸ್ಸುಗಳು ಸಾಕಾಗ್ತಿಲ್ಲ. ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಸಾರ್!"
ತ-ಪ್ರಯಾಣಿಕಳೊಬ್ಬಳು ಸಣ್ಣ ಮಗುವೊಂದನ್ನು ಹಿಡಿದುಕೊಂದು ಬಸ್ಸು ಬಿಡುವಸ್ಟರಲ್ಲಿ ಹತ್ತಿದ್ದಳು - ಕಂಡಕ್ಟರ್ ಸಾಹೇಬರು ಮೊದಲೇ "ಇಲ್ಲಿ ಸೀಟು ಇಲ್ಲ!" ಎಂದು ಹೇಳಿದ್ದರೂ, "ನೋಡಿ ಸ್ವಾಮಿ... ಮಗು ಇದೆ ಜೊತೆಯಲ್ಲಿ"... ಎಂದು ಆರ್ತನಾದ ಹಾಡತೊಡಗಿದಳು.
ಸ-ಪ್ರಯಾಣಿಕರೊಬ್ಬರು ತಮ್ಮ ಲಗೇಜು ಇಡಲು ಜಾಗವಿಲ್ಲದೆ ತ-ಪ್ರಯಾಣಿಕರೊಬ್ಬರ ಲಗೇಜನ್ನು ಸ್ವಲ್ಪ ಸರಿಸಲು ಹೋದಾಗ ತ-ಪ್ರಯಾಣಿಕರು ಕುಂಡಿ-ಕೊಯ್ದ ಹಂದಿಯಂತೆ ಅರಚಾಡಿದರು. ಕಂಡಕ್ಟರ್ ಮೂಕ ಪ್ರೇಕ್ಷಕರಾಗಿ ಉಳಿದು ಬಿಟ್ಟಿದ್ದರು.
ತ-ಪ್ರಯಾಣಿಕರಿಗೆ ಹೀಗೆ ಪ್ರಯಾಣ ಮಾಡಿ ಅಭ್ಯಾಸ ನೋಡಿ. ತಮ್ಮ ಕೈಲಿದ್ದ ಚೀನಾ ಮೊಬೈಲನ್ನು ಜೋರಾಗಿ ಬೇನಾಮಿ ಹಾಡೊಂದನ್ನು ಅರಚಲು ಬಿಟ್ಟು ಜೋರಾಗಿ ಲೋಕಾಭಿರಾಮದ ಮಾತುಗಳನ್ನು ಮಾತನಾಡಲು ಪ್ರಾರಂಭಿಸಿದರು.
ತ-ಪ್ರಯಾಣಿಕರಿಗೆ ತಾವು ಕಳೆದುಕೊಳ್ಳೋದು ಏನೂ ಇರಲಿಲ್ಲ. ಸ-ಪ್ರಯಾಣಿಕರಿಗೆ ಸರಿಯಾಗಿ ಸೀಟು ಸಿಗದೇ, ನಿದ್ದೆ ಇಲ್ಲದೆ ಹೆಚ್ಚು ದುಡ್ಡು ಕೊಟ್ಟು ಟಿಕೇಟು ಪಡೆದು ಹುಚ್ಚರಾದೆವು ಅನ್ನೋದು ಖಾತ್ರಿಯಾಯಿತು. ಕಂಡಕ್ಟರ್ ಸಾಹೇಬರು ನಿಂತು ಪ್ರಯಾಣ ಮಾಡಿದರು.
ಇದೆಲ್ಲ ಹೀಗೆ ಯಾಕಾಯಿತು ಅಂತ ಸ್ವಲ್ಪ ಸಮಯ ವಿಚಾರ ಮಾಡಿದೆ -
೧. ಬೆಂಗಳೂರಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಜನ ಇದ್ದಾರೆ
೨. ಜನರಿಗೆ 'ನಾನು-ಇವನ-ತಲೆ-ತುಳಿದರು-ಪರವಾಗಿಲ್ಲ" ಅನ್ನೋ ಭಾವನೆ
೩. ಸರಿಯಾದ ಸಮಯಕ್ಕೆ ಟಿಕೇಟು ಪಡೆಯದ ನಮ್ಮಂತಹ ಪ್ರಯಾಣಿಕರು
ಏನೇ ಹೇಳಿ, ಕರ್ನಾಟ ಸಾರಿಗೆ ಬಸ್ಸಿನಲ್ಲಿ ಹಬ್ಬದ ಸಮಯದಲ್ಲಿ ರಾತ್ರಿಯ ಪ್ರಯಾಣ ನರಕವಾಗೋದು ಬಹುತೇಕ ಸತ್ಯ!
Thursday, December 3, 2009
ನಗುವಿನ ನಾನಾರ್ಥಗಳು...
ನಾನು ಗಂಭೀರವಾಗಿ ಮಾತನ್ನು ಶುರು ಮಾಡಿದೆ, "ನೋಡಿ, ಇವತ್ತು ಶನಿವಾರ. ಕೆಲಸದ ಅನಿವಾರ್ಯತೆಯಿಂದಾಗಿ ನಾವು ಇಂದು ಆಫೀಸಿಗೆ ಬರಬೇಕಾಗಿದೆ. ಇನ್ನು ಮುಂದೆ ಹೀಗಾಗಬಾರದು ಅಂದ್ರೆ ನಾವು ನಮ್ಮ ಕೆಲಸವನ್ನು ನಿಗದಿತ ಸಮಯದಲ್ಲಿ ಮುಗಿಸಬೇಕು. ಈ ಕೆಲಸ ಇನ್ನೆರಡು ಘಂಟೆಗಳಲ್ಲಿ ಮುಗಿಸಬಹುದು ಅಂತ ನನಗೆ ಗೊತ್ತು. ಈಗ ಸಮಯ ೫:೩೦. ೬ ಆಗಲು ಇನ್ನರ್ಧ ಘಂಟೆ ಇದೆ. ಇನ್ನು ಆಫೀಸಿನಲ್ಲಿ ಇರಲು ಹೋಗಬೇಡಿ.. ನಾಳೆ ಬಂದು ಕೆಲಸ ಮುಗಿಸಿ"
ಅಲ್ಲಿ ನಿಂತು ನನ್ನ ಮಾತನ್ನು ಆಲಿಸುತ್ತಿದ್ದ ಸಹೋದ್ಯೋಗಿಯೊಬ್ಬಳು ಕಿಸಕ್ಕನೆ ನಕ್ಕಳು...
ನಗುವಿನಲ್ಲಿ ಮುಗ್ಧತೆ ಇದ್ದರೂ ಅದರ ಹಿಂದಿದ್ದ ಮಾತನಾಡದ ಪದಗಳನ್ನು ನಾನು ಅವಳ ಕಣ್ಣಿನಲ್ಲಿ ಕಂಡೆ - "ನಮಗಿನ್ನೂ ರಜಾ ದಿನದಂದು ಸಾಯಂಕಾಲ ೬ ಘಂಟೆಯ ಮೇಲೆ ಇದ್ದು ಕೆಲಸ ಮಾಡುವಷ್ಟು ತಲೆ ಕೆಟ್ಟಿಲ್ಲ"
ಅಲ್ಲಿ ನಿಂತು ನನ್ನ ಮಾತನ್ನು ಆಲಿಸುತ್ತಿದ್ದ ಸಹೋದ್ಯೋಗಿಯೊಬ್ಬಳು ಕಿಸಕ್ಕನೆ ನಕ್ಕಳು...
ನಗುವಿನಲ್ಲಿ ಮುಗ್ಧತೆ ಇದ್ದರೂ ಅದರ ಹಿಂದಿದ್ದ ಮಾತನಾಡದ ಪದಗಳನ್ನು ನಾನು ಅವಳ ಕಣ್ಣಿನಲ್ಲಿ ಕಂಡೆ - "ನಮಗಿನ್ನೂ ರಜಾ ದಿನದಂದು ಸಾಯಂಕಾಲ ೬ ಘಂಟೆಯ ಮೇಲೆ ಇದ್ದು ಕೆಲಸ ಮಾಡುವಷ್ಟು ತಲೆ ಕೆಟ್ಟಿಲ್ಲ"
Monday, September 7, 2009
ಮಾದರಿ ಬೈಗುಳಗಳು
ಇದು ನಡೆದದ್ದು ಸುಮಾರು ನಾಲ್ಕು ವರ್ಷಗಳ ಹಿಂದೆ ಹರಿಹರದ ನಮ್ಮ ಮನೆಯ ಪಕ್ಕ. ಅದೊಂದು ರವಿವಾರ; ಮಧ್ಯಾಹ್ನದ ೨ ಘಂಟೆಗೆ ಮಾಡಲು ಏನು ಕೆಲಸವಿಲ್ಲದೆ ಮಲಗಲು ಅಣಿಯಾದಾಗ ಯಾರೋ ಹೊರಗಡೆ ಜಗಳವಾಡುತ್ತಿರುವುದು ಕೇಳಿಸಿತು. ಸಾಮಾನ್ಯವಾಗಿ ರಸ್ತೆಯೆ ಮೇಲೆ ನಡೆಯುವ ಇಂತಹ ಸಾಮಾನ್ಯ ವಿಷಯಗಳನ್ನ ಒಂದು ಕಿವಿ ಇಂದ ಕೇಳಿ ಇನ್ನೊಂದರಿಂದ ಹೊರ ಬಿಡುವುದು ನನ್ನ ಅಭ್ಯಾಸ... ಆದರೆ ಅಂದು ನನಗೆ ಬೇರೆಯ ಕೆಲಸವಿರದಿದ್ದ ಕಾರಣ ಈ ಜಗಳ-ಮಾತು ಕಥೆಯನ್ನು ಕೇಳತೊಡಗಿದೆ.
"ಕೊಡಲೇ!...", ಎಂದನೊಬ್ಬ.
ಕಥೆ ಮುಂದುವರೆಸುವ ಮುನ್ನ ಪಾತ್ರಧಾರಿಗಳ ಬಗ್ಗೆ ತಮಗೆಲ್ಲ ಗೊತ್ತುಮಾಡಿಕೊಡಬೇಕೆನಿಸುತ್ತಿದೆ.
ಜಗಳವಾಡುತ್ತಿದ್ದದ್ದು ನಮ್ಮ ಪಕ್ಕದ ಮನೆಯ ಹುಡುಗರು - ಸುಮಾರು ೧೦ ವರುಷ ವಯಸ್ಸು ಇಬ್ಬರದ್ದು. ಒಬ್ಬನ ಹೆಸರು ರವಿ; ಇನ್ನೊಬ್ಬ ಹರ್ಷ.
ಹರ್ಷ ಸ್ವಲ್ಪ ಚಿಕ್ಕವನು - ಅವನ ಮನೆ ಎರಡು ಓಣಿಗಳಾಚೆ ಇದೆ; ಆದರೆ ಇಲ್ಲಿ ತನ್ನ ಅತ್ತೆ ಮಗ (ಅಂದರೆ ರವಿ) ಜೊತೆ ಆಟ ಆಡಲು (ಜಗಳ ಮಾಡಲು??)ಬರುತ್ತಿರುತ್ತಾನೆ.
ಪಕ್ಕದ ಮನೆಯಲ್ಲಿ ಒಂದು ಮಾವಿನ ಮರವಿದೆ - ಅದು ಎಡವಟ್ಟು ;ಸಮಯವಿಲ್ಲದ ಸಮಯಕ್ಕೆ ಅದಕ್ಕೆ ಮಾವಿನ ಮಿಡಿಗಳು ಬಿಡುತ್ತವೆ - ಮಳೆ-ಗಾಳಿಗೆ ಉದುರಿ ಸಹ ಹೋಗುತ್ತವೆ...
"ಇಲ್ಲಾ ಹೋಗಲೇ!... ಅತ್ತೀ... ಅತ್ತೀ... ನೋಡಿಲ್ಲಿ ರವಿ ನಂಗೆ ಹೊಡಿತಾನೆ..." ... ಇಬ್ಬರೂ ಜೋರಾಗಿ ಹೊಡದಾಡತೊಡಗಿದರು. ಅಪರೂಪಕ್ಕೆ ಒಂದು ದೊಡ್ಡ (ಹುಳಿ) ಮಾವಿನ ಹಣ್ಣು ಬಿದ್ದಿದ್ದು, ಅದು ಹರ್ಷನಿಗೆ ಸಿಕ್ಕಿತ್ತು - ಅದನ್ನು ರವಿ ನೋಡಿ ಬಿಟ್ಟಿದ್ದ. ಜಗಳ ಆಗಲೇ ಬೇಕಿತ್ತು... ಆದರೆ...
"ಲೆ ಮಿಂ****! ಕೊಡೋ!...", ಅಂದ ರವಿ. ಹರ್ಷ-ರವಿ ಒಬ್ಬರು-ಇನ್ನೊಬ್ಬರನ್ನು ಫುಟ್ಬಾಲಿನಂತೆ ಒದ್ದು , ರವಿ ಹರ್ಷನಿಗೆ ಮಣ್ಣು ತಿನ್ನಿಸಿ, ಹರ್ಷ ರವಿಯ ತಲೆಯನ್ನು ಗೋಡೆಗೆ ಜಜ್ಜಿ ಜಗಳ ಮುಂದೆ ವರಿಯಿತು. ಇದು ಹೊಸತೇನಲ್ಲ ಅಂದು ನಾನು ಸುಮ್ಮನಿದ್ದೆ - ಆದರೆ ಅವರ ಮಾತುಗಳನ್ನ ಅಂದೆ ನಾನು ಪದ ಬಿಡದೆ ಆಲಿಸುತ್ತಿದ್ದುದು.
ಹರ್ಷ ರವಿಗಿಂತ ಸ್ವಲ್ಪ ಚಿಕ್ಕವನು ಹಾಗು ಜಗಳದಲ್ಲಿ ಸಾಮಾನ್ಯ ವಾಗಿ ಹೊಡೆತ ತಿನ್ನುವುದು ಜಾಸ್ತಿ... ರವಿಯ ಪ್ರತಿಯೊಂದು ಹೊಡೆತಕ್ಕೆ ಪ್ರತ್ಯುತ್ತರವಾಗಿ ಹರ್ಷ ಒಂದು ಬೈಗುಳವನ್ನು ಉದುರಿಸುತ್ತಿದ್ದ...
"ತಾಯ್***!"... ಅಂದ ಹರ್ಷ, ರವಿ ಹರ್ಷನ ಬೆನ್ನಿಗೆ ಎರಡು ಗುದ್ದು ನೀಡಿದಾಗ...
"ಬೇವ**!"... ರವಿ ಹರ್ಷನ ಕಾಲನ್ನು ಹಿಡಿದು ಎಳೆದಾಡುತ್ತಿದ್ದಾಗ...
"ನಿಮ್ಮ*ನ!"...
...
...
ಇನ್ನು ಸುಮಾರಿಷ್ಟು ಇದ್ದುವು ಆದರೆ ಈಗ ನೆನಪಿಲ್ಲ ಬಿಡಿ. ಆಲಿಸಿದ ಆ ಹದಿನೈದು ನಿಮಿಷಗಳಲ್ಲಿ ಕನ್ನಡದ ಬಹುತೇಕ ಎಲ್ಲ ಬೈಗುಳಗಳನ್ನು ಕೇಳಿಬಿಟ್ಟೆನನಿಸುತ್ತದೆ. ಕೆಲವು ಪದಗಳಿಗೆ ಅರ್ಥ ನನಗೆ ಆಗಲಿನ್ನು ಗೊತ್ತೂ ಸಹ ಇರಲಿಲ್ಲ! ಛೆ! ಹೀಗೆಲ್ಲ ಮಕ್ಕಳು ತಮ್ಮ ತಮ್ಮಲ್ಲಿ ಬೈದುಕೊಳ್ಳುವುದೇ? ಬೇಜಾರಾಯಿತು... ಅಷ್ಟರಲ್ಲಿ ರವಿಯ ತಾಯಿ ಅಡುಗೆಯ ಮನೆಯಿಂದ ಹೊರಗೆ ಬಂದು ಅಟ್ಟದ ಮೇಲೆ ಜಗಳವಾಡುತ್ತಿದ್ದ ಇಬ್ಬರನ್ನು ಕುರಿತು...
"ಮಿಂಡ್ರಿಘುಟ್ದೋರಾ! ಬನ್ರೊ ಕೆಳಗೆ!... ಹರ್ಷ! ಹೋಗೊ ನಿನ್ ಮನೆಗೆ - ನಿಮ್ಮಪ್ಪಂಗೆ ಹೇಳ್ತಿನಿ ತಡಿ! ಏ -ರವೀ! ನಡಿ ಓದಕ್ಕೆ... ಬೇವರ್ಸಿಗಳು... !", ಎಂದು ಹಿತವಚನಗಳನ್ನು ನುಡಿದು ಒಳನಡೆದಳು!
ಕಿವಿಗಳು ಪಾವನವಾದುವು.
ಮಕ್ಕಳ ತಪ್ಪೇನು ಬಿಡಿ - ಹಿರಿಯರು ಅರ್ಥ ತಿಳಿದುಕೊಳ್ಳದೆ , ಊಟಕ್ಕೆ ಅನ್ನ-ಸಾರು ಬಳಸಿದಂತೆ, ಮಾತಿನಲ್ಲಿ ಬೈಗುಳಗಳನ್ನು ಬಳಸಿದರೆ ಕಿರಿಯರಿಗೆ ಅದೇ ಮಾದರಿ!
ಅಂದ ಹಾಗೆ, ಇದೆಲ್ಲ ನನಗೆ ನೆನಪು ಬಂದದ್ದು ನೆನ್ನೆಯ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಹದಿನಾರನೇಯ ಪುಟದಲ್ಲಿ ಮುದ್ರಿತವಾದ ಈ ವಾಕ್ಯವನ್ನು ಓದಿ...
"Life's disappointments are harder to take when you don't know any swear words" - Calvin & Hobbes
ಈ ವಾಕ್ಯಕ್ಕೆ ಇನ್ನೊಂದು ವಾಕ್ಯ ಸೇರಿಸಬೇಕಾಗಿತ್ತು...
"Even if you know them, think before you use them on your near and dear ones!"
"ಕೊಡಲೇ!...", ಎಂದನೊಬ್ಬ.
ಕಥೆ ಮುಂದುವರೆಸುವ ಮುನ್ನ ಪಾತ್ರಧಾರಿಗಳ ಬಗ್ಗೆ ತಮಗೆಲ್ಲ ಗೊತ್ತುಮಾಡಿಕೊಡಬೇಕೆನಿಸುತ್ತಿದೆ.
ಜಗಳವಾಡುತ್ತಿದ್ದದ್ದು ನಮ್ಮ ಪಕ್ಕದ ಮನೆಯ ಹುಡುಗರು - ಸುಮಾರು ೧೦ ವರುಷ ವಯಸ್ಸು ಇಬ್ಬರದ್ದು. ಒಬ್ಬನ ಹೆಸರು ರವಿ; ಇನ್ನೊಬ್ಬ ಹರ್ಷ.
ಹರ್ಷ ಸ್ವಲ್ಪ ಚಿಕ್ಕವನು - ಅವನ ಮನೆ ಎರಡು ಓಣಿಗಳಾಚೆ ಇದೆ; ಆದರೆ ಇಲ್ಲಿ ತನ್ನ ಅತ್ತೆ ಮಗ (ಅಂದರೆ ರವಿ) ಜೊತೆ ಆಟ ಆಡಲು (ಜಗಳ ಮಾಡಲು??)ಬರುತ್ತಿರುತ್ತಾನೆ.
ಪಕ್ಕದ ಮನೆಯಲ್ಲಿ ಒಂದು ಮಾವಿನ ಮರವಿದೆ - ಅದು ಎಡವಟ್ಟು ;ಸಮಯವಿಲ್ಲದ ಸಮಯಕ್ಕೆ ಅದಕ್ಕೆ ಮಾವಿನ ಮಿಡಿಗಳು ಬಿಡುತ್ತವೆ - ಮಳೆ-ಗಾಳಿಗೆ ಉದುರಿ ಸಹ ಹೋಗುತ್ತವೆ...
"ಇಲ್ಲಾ ಹೋಗಲೇ!... ಅತ್ತೀ... ಅತ್ತೀ... ನೋಡಿಲ್ಲಿ ರವಿ ನಂಗೆ ಹೊಡಿತಾನೆ..." ... ಇಬ್ಬರೂ ಜೋರಾಗಿ ಹೊಡದಾಡತೊಡಗಿದರು. ಅಪರೂಪಕ್ಕೆ ಒಂದು ದೊಡ್ಡ (ಹುಳಿ) ಮಾವಿನ ಹಣ್ಣು ಬಿದ್ದಿದ್ದು, ಅದು ಹರ್ಷನಿಗೆ ಸಿಕ್ಕಿತ್ತು - ಅದನ್ನು ರವಿ ನೋಡಿ ಬಿಟ್ಟಿದ್ದ. ಜಗಳ ಆಗಲೇ ಬೇಕಿತ್ತು... ಆದರೆ...
"ಲೆ ಮಿಂ****! ಕೊಡೋ!...", ಅಂದ ರವಿ. ಹರ್ಷ-ರವಿ ಒಬ್ಬರು-ಇನ್ನೊಬ್ಬರನ್ನು ಫುಟ್ಬಾಲಿನಂತೆ ಒದ್ದು , ರವಿ ಹರ್ಷನಿಗೆ ಮಣ್ಣು ತಿನ್ನಿಸಿ, ಹರ್ಷ ರವಿಯ ತಲೆಯನ್ನು ಗೋಡೆಗೆ ಜಜ್ಜಿ ಜಗಳ ಮುಂದೆ ವರಿಯಿತು. ಇದು ಹೊಸತೇನಲ್ಲ ಅಂದು ನಾನು ಸುಮ್ಮನಿದ್ದೆ - ಆದರೆ ಅವರ ಮಾತುಗಳನ್ನ ಅಂದೆ ನಾನು ಪದ ಬಿಡದೆ ಆಲಿಸುತ್ತಿದ್ದುದು.
ಹರ್ಷ ರವಿಗಿಂತ ಸ್ವಲ್ಪ ಚಿಕ್ಕವನು ಹಾಗು ಜಗಳದಲ್ಲಿ ಸಾಮಾನ್ಯ ವಾಗಿ ಹೊಡೆತ ತಿನ್ನುವುದು ಜಾಸ್ತಿ... ರವಿಯ ಪ್ರತಿಯೊಂದು ಹೊಡೆತಕ್ಕೆ ಪ್ರತ್ಯುತ್ತರವಾಗಿ ಹರ್ಷ ಒಂದು ಬೈಗುಳವನ್ನು ಉದುರಿಸುತ್ತಿದ್ದ...
"ತಾಯ್***!"... ಅಂದ ಹರ್ಷ, ರವಿ ಹರ್ಷನ ಬೆನ್ನಿಗೆ ಎರಡು ಗುದ್ದು ನೀಡಿದಾಗ...
"ಬೇವ**!"... ರವಿ ಹರ್ಷನ ಕಾಲನ್ನು ಹಿಡಿದು ಎಳೆದಾಡುತ್ತಿದ್ದಾಗ...
"ನಿಮ್ಮ*ನ!"...
...
...
ಇನ್ನು ಸುಮಾರಿಷ್ಟು ಇದ್ದುವು ಆದರೆ ಈಗ ನೆನಪಿಲ್ಲ ಬಿಡಿ. ಆಲಿಸಿದ ಆ ಹದಿನೈದು ನಿಮಿಷಗಳಲ್ಲಿ ಕನ್ನಡದ ಬಹುತೇಕ ಎಲ್ಲ ಬೈಗುಳಗಳನ್ನು ಕೇಳಿಬಿಟ್ಟೆನನಿಸುತ್ತದೆ. ಕೆಲವು ಪದಗಳಿಗೆ ಅರ್ಥ ನನಗೆ ಆಗಲಿನ್ನು ಗೊತ್ತೂ ಸಹ ಇರಲಿಲ್ಲ! ಛೆ! ಹೀಗೆಲ್ಲ ಮಕ್ಕಳು ತಮ್ಮ ತಮ್ಮಲ್ಲಿ ಬೈದುಕೊಳ್ಳುವುದೇ? ಬೇಜಾರಾಯಿತು... ಅಷ್ಟರಲ್ಲಿ ರವಿಯ ತಾಯಿ ಅಡುಗೆಯ ಮನೆಯಿಂದ ಹೊರಗೆ ಬಂದು ಅಟ್ಟದ ಮೇಲೆ ಜಗಳವಾಡುತ್ತಿದ್ದ ಇಬ್ಬರನ್ನು ಕುರಿತು...
"ಮಿಂಡ್ರಿಘುಟ್ದೋರಾ! ಬನ್ರೊ ಕೆಳಗೆ!... ಹರ್ಷ! ಹೋಗೊ ನಿನ್ ಮನೆಗೆ - ನಿಮ್ಮಪ್ಪಂಗೆ ಹೇಳ್ತಿನಿ ತಡಿ! ಏ -ರವೀ! ನಡಿ ಓದಕ್ಕೆ... ಬೇವರ್ಸಿಗಳು... !", ಎಂದು ಹಿತವಚನಗಳನ್ನು ನುಡಿದು ಒಳನಡೆದಳು!
ಕಿವಿಗಳು ಪಾವನವಾದುವು.
ಮಕ್ಕಳ ತಪ್ಪೇನು ಬಿಡಿ - ಹಿರಿಯರು ಅರ್ಥ ತಿಳಿದುಕೊಳ್ಳದೆ , ಊಟಕ್ಕೆ ಅನ್ನ-ಸಾರು ಬಳಸಿದಂತೆ, ಮಾತಿನಲ್ಲಿ ಬೈಗುಳಗಳನ್ನು ಬಳಸಿದರೆ ಕಿರಿಯರಿಗೆ ಅದೇ ಮಾದರಿ!
ಅಂದ ಹಾಗೆ, ಇದೆಲ್ಲ ನನಗೆ ನೆನಪು ಬಂದದ್ದು ನೆನ್ನೆಯ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಹದಿನಾರನೇಯ ಪುಟದಲ್ಲಿ ಮುದ್ರಿತವಾದ ಈ ವಾಕ್ಯವನ್ನು ಓದಿ...
"Life's disappointments are harder to take when you don't know any swear words" - Calvin & Hobbes
ಈ ವಾಕ್ಯಕ್ಕೆ ಇನ್ನೊಂದು ವಾಕ್ಯ ಸೇರಿಸಬೇಕಾಗಿತ್ತು...
"Even if you know them, think before you use them on your near and dear ones!"
Tuesday, August 11, 2009
Going bilingual with my blog...
If you have noticed, I just changed the title of the blog to English... One of my friends suggested that I switch over to a language that is understood by many and I felt that it was a valid thing to do. I plan to add posts in English as well as in Kannada; some posts are best read in a particular language which adds to the essence of the topic being explained... :) in my case it would be Kannada.
I started a new blog with content written in English:
http://jeevanajokali2.blogspot.com/
I started a new blog with content written in English:
http://jeevanajokali2.blogspot.com/
Friday, July 10, 2009
ಒಹ್! ನೀವು ಬ್ಯಾಚಲರ್ಸ್ ಆ?
ಕೆಲಸದಿಂದ ಕೆಲವು ದಿನ ರಜ ಪಡೆದು ನನ್ನ ಎಮ್.ಎಸ್. ಮೊದಲನೇಯ ಸೆಮೆಸ್ಟರ್ ಪರೀಕ್ಷೆಗೆ ಓದುತ್ತಿದ್ದಾಗ ನಡೆದದ್ದು...
ಬೆಳಗಿನ ಜಾವ ೧ ಘಂಟೆಗೆ ಮಲಗಿ ೬ ಘಂಟೆಗೆ ಎದ್ದು ಓದಿದ್ದಾಗಿತ್ತು. ಬೆಳಗಿನ ತಿಂಡಿ ಜೊತೆಗೆ ಬಿಸಿ ಕಶಾಯ ಮಾಡಿ ಕುಡಿಯುವ ಆಸೆಯಾಗಿ ಮನೆಯ ಹತ್ತಿರದ ಕಾವೇರಿ ಬೇಕರಿಗೆ ಹೋದಾಗ...
"ಅರ್ಧಾ ಲೀಟರ್ ಹಾಲು ಇದ್ಯಾ?"
"ಹ್ಂ... ", ಅಂದವನೇ, ಹಾಲಿನ ಒಂದು ಪ್ಯಾಕೆಟ್ ನನ್ನೆಡೆಗೆ ತಳ್ಳಿದ ಬೇಕರಿಯವ.
"ಮತ್ತೇನಾದರು ಬೇಕಾ ಸಾರ್?"
"ಬೇಡ", ಅಂದೆ.
"ನಿಮ್ಮ ಮನೆ ಆ *!%ಽ ಅವರ ಬಿಲ್ಡಿಂಗ್ ನಲ್ಲಿ ಇರೋದಲ್ವ?"
"ಅಲ್ಲ... ಇಂಡಿಪೆಂಡೆಂಟ್ ಮನೆ ಇದೆಯಲ್ಲ ಅದು..."
"ಒಹ್! ಆದ್ರೆ ಅಲ್ಲಿ ಬ್ಯಾಚಲರ್ಸ್ ಇದ್ದಾರಲ್ಲ?"
"ನಾವು ಬ್ಯಾಚಲರ್ಸೇ!"
"ಒಹ್... ಹೌದಾ..."!?
ಎಂಥಾ ಕಾಲ ಬಂತು... ಜನಾ ಮುಖಾ ನೋಡಿ ಮದುವೆಯಾಗಿದ್ದಾರೋ ಇಲ್ವೋ ಅಂತಾ ಹೇಳೋ ಹಾಗೆ ಆಗ್ಬಿಟ್ರು!
ಬೆಳಗಿನ ಜಾವ ೧ ಘಂಟೆಗೆ ಮಲಗಿ ೬ ಘಂಟೆಗೆ ಎದ್ದು ಓದಿದ್ದಾಗಿತ್ತು. ಬೆಳಗಿನ ತಿಂಡಿ ಜೊತೆಗೆ ಬಿಸಿ ಕಶಾಯ ಮಾಡಿ ಕುಡಿಯುವ ಆಸೆಯಾಗಿ ಮನೆಯ ಹತ್ತಿರದ ಕಾವೇರಿ ಬೇಕರಿಗೆ ಹೋದಾಗ...
"ಅರ್ಧಾ ಲೀಟರ್ ಹಾಲು ಇದ್ಯಾ?"
"ಹ್ಂ... ", ಅಂದವನೇ, ಹಾಲಿನ ಒಂದು ಪ್ಯಾಕೆಟ್ ನನ್ನೆಡೆಗೆ ತಳ್ಳಿದ ಬೇಕರಿಯವ.
"ಮತ್ತೇನಾದರು ಬೇಕಾ ಸಾರ್?"
"ಬೇಡ", ಅಂದೆ.
"ನಿಮ್ಮ ಮನೆ ಆ *!%ಽ ಅವರ ಬಿಲ್ಡಿಂಗ್ ನಲ್ಲಿ ಇರೋದಲ್ವ?"
"ಅಲ್ಲ... ಇಂಡಿಪೆಂಡೆಂಟ್ ಮನೆ ಇದೆಯಲ್ಲ ಅದು..."
"ಒಹ್! ಆದ್ರೆ ಅಲ್ಲಿ ಬ್ಯಾಚಲರ್ಸ್ ಇದ್ದಾರಲ್ಲ?"
"ನಾವು ಬ್ಯಾಚಲರ್ಸೇ!"
"ಒಹ್... ಹೌದಾ..."!?
ಎಂಥಾ ಕಾಲ ಬಂತು... ಜನಾ ಮುಖಾ ನೋಡಿ ಮದುವೆಯಾಗಿದ್ದಾರೋ ಇಲ್ವೋ ಅಂತಾ ಹೇಳೋ ಹಾಗೆ ಆಗ್ಬಿಟ್ರು!
Subscribe to:
Posts (Atom)