ಕೆ.ಬಿ. ಮೆಸ್
ನಾನು ಬಿ.ಈ. ಓದುತ್ತಿದ್ದಾಗ ಮೊದಲ ಕೆಲವು ತಿಂಗಳು ಮನೆಯಿಂದ ಊಟದ ಡಬ್ಬಿಯನ್ನು ಒಯ್ಯುತ್ತಿದ್ದೆ; ಆದರೆ ಬಿಸಿ-ಬಿಸಿ ಊಟ ಮಾಡಲು ಆಗುತ್ತಿರಲಿಲ್ಲ, ಮನೆಯಿಂದ ಡಬ್ಬವನ್ನು ಎತ್ತಿಕೊಂಡು ಹೋಗಬೇಕಾಗುತ್ತಿತ್ತು. ಕರಿಬಸವೇಶ್ವರ (ಕೆ.ಬಿ.) ಮೆಸ್ ಸೇರಿಕೊಂಡೆ. ಕೆ.ಬಿ. ಮೆಸ್ ನಮ್ಮ ಕಾಲೇಜಿನಿಂದ ಕೆಲವೇ ನೂರು ಮೀಟರ್ ದೂರದಲ್ಲಿತ್ತು. ಮಧ್ಯಾಹ್ನದ ಹೊತ್ತು ನಾನು, ಸೂರಿ ಹಾಗು ಹಲವರು ನಮ್ಮ ತರಗತಿಯವರು ಕೂಡಿ ಮೆಸ್ ಗೆ ಹೋಗೋದು ವಾಡಿಕೆಯಾಗಿತ್ತು. ಊಟದ ಸಮಯವೆಂದರೆ ಹೆಚ್ಚುಕಡಿಮೆ ಪೂರ್ತಿ ಕಾಲೇಜೇ ರೋಡಿನ ಮೇಲೆ ಇರ್ತಿತ್ತು; ಹಲವಾರು ಮಿತ್ರರು ಸಿಗುತ್ತಿದ್ದರು ಹಾಗು ಮಿತ್ರೇತರರು ಕಣ್ಣಿಗೆ ಬೀಳುತ್ತಿದ್ದರು. ದಾವಣಗೆರೆಯ ಮಧ್ಯಾಹ್ನದ ಬಿಸಿಲು ಸ್ವಲ್ಪ ತೀಕ್ಷ್ಣವಾಗೇ ಇರುತ್ತಿತ್ತು; ಆದರೆ ಹೊಟ್ಟೆಯ ಹಸಿವು ಇದನ್ನು ಮೀರಿಸುತ್ತಿತ್ತು!
ಕೆ.ಬಿ. ಮೆಸ್ಸಿನ ಊಟ ಬಹಳ ವಿಶೇಷವಾದುದ್ದೇನಲ್ಲ - ಎರಡು ತೆಳ್ಳನೇಯ ಹಾಗು ಸಣ್ಣ (ಹಪ್ಪಳಕ್ಕೆ ಪೈಪೋಟಿ ನೀಡುವಂತಹ) ಮೈದಾ ಚಪಾತಿಗಳು, ಎರಡು ಪಲ್ಯಗಳು (ಸಾಮಾನ್ಯವಾಗಿ ಒಂದು ಕಾಳಿನ ಪಲ್ಯ ಇದ್ದೇ ಇರುತ್ತಿತ್ತು), ಕರಿಂಡಿ / ಬದನೇಕಾಯಿ ಚಟ್ನಿ, ೫೦ ಮಿ.ಲೀ. ಗೂ ಕಡಿಮೆ ಹುಳಿ ಮೊಸರು, ಸೋಡಾಯುಕ್ತ ಅನ್ನ, ಕುದಿಯುವ ಸಾರು (ಮೂಲಂಗಿ ನಮ್ಮಲ್ಲಿ ಹೇರಳ ಹಾಗು ಸೋವಿ - ಇನ್ನು ಯಾವ ಸಾರು ಅಂತ ನಿಮಗೆ ಬಾಯಿ ಬಿಟ್ಟು ಹೇಳೋದು ಬೇಡ ಅಂದ್ಕೊಂಡಿದ್ದೀನಿ), ಉಪ್ಪಿನಕಾಯಿ, ಉಪ್ಪು - ಅಷ್ಟೆ! ಅದೆಷ್ಟೋ ಬಾರಿ ಪಲ್ಯದಲ್ಲಿ ಕಲ್ಲನ್ನು ಕಡೆದಿದ್ದೇನೆ - ಒಂದು ಹಲ್ಲು ಈ ಮೆಸ್ಸಿನಲ್ಲಿಯೇ ಕೆಡಿಸಿಕೊಂಡೆ ಎಂದರೆ ತಪ್ಪೇನಾಗದು. ಎರಡನೇಯ ಬಾರಿ ಪಲ್ಯ ನೀಡಲು ಹಿಂದೆ-ಮುಂದೆ ಮಾಡುತ್ತಿದ್ದರು ಮೆಸ್ಸಿನ ತಾತಾ. ಕೆಲವೊಮ್ಮೆ ಮೊಸರು ಅತಿ ಹುಳಿಯಾಗಿ ಬಿಟ್ಟು ಬಂದದ್ದೂ ಇದೆ. ತಾತಾ ಒಂದು ನೋಟು ಪುಸ್ತಕದಲ್ಲಿ ನಮ್ಮ ಲೆಕ್ಕವನ್ನು ಬರೆದಿಡುತ್ತಿದ್ದರು. ಮೊದಮೊದಲು ನನ್ನ ತಮ್ಮನ ಹಾಗು ನನ್ನ ಲೆಕ್ಕವನ್ನು ಏರುಪೇರು ಮಾಡಿದರಾದರು, ಕ್ರಮೇಣ ಅದನ್ನು ಸರಿ ಪಡೆಸಿದರು.
ಊಟ ತಿನ್ನಲು ಅಡ್ಡಿಯಿರಲಿಲ್ಲ - ಹೊಟ್ಟೆಗೆ ಇದನ್ನರಗಿಸಲು ಕಷ್ಟಪಡಬೇಕಾಗುತ್ತಿರಲಿಲ್ಲ; ಹಾಗಾಗಿ ಮೆಸ್ ನ ತಾತ/ಮಗನ ಜೋಡಿ ಸಹ ಖುಶ್, ನಾವು ಖುಶ್! ಪ್ರತಿ ಊಟದ ಬೆಲೆ ೧೧-೧೩ ಇತ್ತು; ತಿಂಗಳಿನ ಮೊತ್ತವನ್ನು ತಿಂಗಳು ಶುರುವಾಗುತ್ತಿದ್ದಂತೆ ಕೊಡಬೇಕಿತ್ತು. ಅಂದರೆ ತಿಂಗಳಿಗೆ (ಸಾಮಾನ್ಯವಾಗಿ ೨೧ ದಿನಗಳು) ೨೫೦ ಕ್ಕು ಹೆಚ್ಚು ಖರ್ಚು ಆಗುತ್ತಿರಲಿಲ್ಲ. ಪ್ರತಿಯೊಂದು ರೂಪಾಯಿಗು ಬೆಲೆ ಇತ್ತು - ನೆನಸಿಕೊಂಡರ ಖುಶಿಯಾಗೊತ್ತೆ. ಇಂದು ಒಂದು ಒಳ್ಳೆಯ ಬುಫೆಗೆ ಹೋದರೆ ಕನಿಷ್ಟ ೨೫೦+ತೆರಿಗಗಳು ಖಂಡಿತ; ಊಟದಲ್ಲಿ ನಿಮಗೇನು ಬೇಕು, ಎಷ್ಟು ಬೇಕು ಅಷ್ಟನ್ನು ಸ್ವಾಹ ಅನ್ನಬಹುದು; ಕಲ್ಲು ಹುಡುಕಿದರೂ ಸಿಗದು. ಆದರೆ, ಕೆ.ಬಿ. ಮೆಸ್ಸಿನಲ್ಲಿದ್ದ ಮಜ ಇಲ್ಲೆಲ್ಲಿ?
Wednesday, May 26, 2010
Monday, May 24, 2010
ನಮ್ಮೂರ ನೆನಪುಗಳು - ೧
ಈ ಬಾರಿ ಹರಿಹರಕ್ಕೆ ಹೋದಾಗ ಶಾಲೆ ಹಾಗು ಕಾಲೇಜು ದಿನಗಳಲ್ಲಿ ಕಳೆದ ಸವಿ ನೆನಪುಗಳು ಮನಸ್ಸಿನಲ್ಲಿ ಮರುಕಳಿಸಿ ಬಹಳ ಸಂತಸವೆನಿಸಿತು. ಕೆಲ ನನಪುಗಳನ್ನು ಇಲ್ಲಿ ಬರೆದಿದ್ದೇನೆ; ಓದಿ ಆನಂದಿಸಿ -
ಬೆಳಗಿನ ಜಾವ ಬಸ್ಸನ್ನೇರುವ ಸರ್ಕ್ ಸ್:
ದಾವಣಗೆರೆಯ ಬಾಪೂಜಿ ಕಾಲೇಜಿನಲ್ಲಿ ಓದುತ್ತಿರುವಾಗ ನಡೆಯುತ್ತಿದ್ದ ಪ್ರತಿ ದಿನದ ಸಾಹಸದ ಕೆಲಸ ಇದು! ನಮ್ಮೂರಿನಿಂದ (ಅಂದರೆ, ಹರಿಹರ) ಕಾಲೇಜಿಗೆ ನೇರವಾಗಿ ಹೋಗುವ ಒಂದು ಬಸ್ಸು ಇತ್ತು (ಈಗ ಸಹ ಇದೆ ಎಂದು ನನಗೆ ಕೇಳಿ ಬಂದಿದೆ). ಈ ಬಸ್ಸು ಬೆಳಗಿನ ಜಾವ ೭ - ೭.೧೫ರ ಒಳಗಡೆ ಹರಿಹರ ಬಸ್ ನಿಲ್ದಾಣಕ್ಕೆ ಬರುತ್ತಿತ್ತು. ಈ ಒಂದು ಬಸ್ಸನ್ನು ಅವಲಂಬಿಸಿದ್ದವರು ಹಲವಾರು ವಿದ್ಯಾರ್ಥಿಗಳು - ಪೀ.ಯೂ. ಕಾಲೇಜಿನಿಂದ ಹಿಡಿದು ಅನೇಕ ಡಿಗ್ರೀ ಕಾಲೇಜಿನ ಜನ ಇದನ್ನು ಹತ್ತೋರು. ಜನರ ಸಂಖ್ಯೆ ೩ ಬಸ್ಸುಗಳಿದ್ದರೂ ಸಾಕಾಗದಷ್ಟು ಇರುತ್ತಿತ್ತು. ಸೀಟು ಸಿಗುವ ವಿಷಯ ಆಚೆಯಿರಲಿ, ನಿಲ್ಲಲು ಜಾಗ ಸಿಗುವುದೇ ಒಂದು ದೊಡ್ಡ ಸಾಹಸವಾಗಿರುತ್ತಿತ್ತು. ಬಸ್ಸು ಹತ್ತಿರದ ಒಂದು ಹಳ್ಳಿಯೊಂದರಿಂದ ಬರುತ್ತಿದ್ದರಿಂದ ಅದರಲ್ಲಿ ಮೋತೀವೀರಪ್ಪ ಕಾಲೇಜಿನ ವಿದ್ಯಾರ್ಥಿಗಳು ಮೊದಲೇ ತುಂಬಿರುತ್ತಿದ್ದರು. ಉಳಿದ ಕೆಲವೇ ಸೀಟುಗಳಿಗಾಗಿ ನೂಕುನುಗ್ಗಲಾಟವಾಗುತ್ತಿತ್ತು. ಬಸ್ಸು ದೂರದಿಂದಲೇ ಬರುವುದನ್ನು ಗಮನಿಸಿ ಹುಡುಗರು ಬಸ್ಸಿನೋಡನೆ ಓಡಿ ಅದನ್ನೇರಲು ಸಜ್ಜಾಗುತ್ತಿದ್ದರು. ಬಸ್ಸು ಹತ್ತಿರ ಬಂತು ಅಂದಾಕ್ಷಣ ಅದರಲ್ಲಿಂದ ಇಳಿಯುವ ಜನರನ್ನು ಗಮನಿಸದೆ ನುಗ್ಗುತ್ತಿದ್ದರು. ಆ ಬಸ್ಸೋ ಒಂದು ಚಕ್ಕಡಿಗಾಡಿಗಿಂತಲೂ ಮೆಲ್ಲಗೆ ಚಲಿಸುತ್ತಿತ್ತು. ೧೨೦ ಕ್ಕೂ ಹೆಚ್ಚು ಜನರನ್ನು ಆ ಹಳೆಯ ಗಾಡಿ ಹೊತ್ತುಕೊಂಡು ಸಾಗುವಂತೆ ಮಾಡುತ್ತಿದ್ದ ಚಾಲಕನು ನಿಜವಾಗಿಯೂ ಚೆನ್ನಾಗಿ ಬಸ್ಸನ್ನು ಓಡಿಸುತ್ತಿದ್ದನೆನ್ನಬೇಕು.
ಬಸ್ಸನ್ನು ಏರುವುದು ಒಂದು ಸಾಹಸವಾದರೆ, ಅದರಲ್ಲಿ ನಿಲ್ಲುವುದು ಇನ್ನೊಂದು ಸಾಹಸ. ಒಬ್ಬರಿಗೊಬ್ಬರು ಮೈಯನ್ನು ಅಂಟಿಸಿ ನಿಲ್ಲದೆ ಬೇರೆಯ ವಿಧಿಯೇ ಇರಲಿಲ್ಲ. ಗಾಳಿಯಾಡದೆ, ಎಲ್ಲ ಬೆವೆತ ಮೈಗಳಿಂದ ಎಲ್ಲರ ಅಂಗಿಗಳು ಹಸಿ. ಬಸ್ಸಿನ ಸ್ಥಿತಿಯು ಅಷ್ಟೇನು ಚೆನ್ನಾಗಿರಲಿಲ್ಲ - ಮುರಿದು ಹೋದ ಕಿಟಕಿಗಳು, ಮುರಿದು ಬೀಳುವ ಅಂಚಿನಲ್ಲಿದ್ದ ಫೂಟ್-ರೆಸ್ಟ್, ತುಂಡಾಗಿದ್ದ ಬಸ್ಸಿನ ಮೇಲ್ಭಾಗ. ಇಷ್ಟೆಲ್ಲವಿದ್ದರೂ ಜನರು ಪ್ರತಿ ದಿನ ಈ ಬಸ್ಸಿಗಾಗಿ ಕಾಯುತ್ತಿದ್ದರು!
ಇಷ್ಟೆಲ್ಲ ಕಷ್ಟ ಪಡುವುದು ಬೇಕಿತ್ತೆ? ಸುಮ್ಮನೆ ದಾವಣಗೆರೆಗೆ ನೇರವಾಗಿ ಹೋಗಲು ಸೌಕರ್ಯವಿರಲಿಲ್ಲವೆ ಎಂದು ನಿಮಗೆ ಅನ್ನಿಸಿರಬಹುದು. ನಿಜ, ಬಸ್ಸುಗಳು ಸಾಕಷ್ಟು ಇದ್ದುವಾದರು, ನೇರವಾಗಿ ಕೇವಲ ಬಸ್ ಪಾಸನ್ನು ತೋರಿಸಿ ಕಾಲೇಜಿನವರೆಗೆ ಹೋಗಬಹುದಾದಂತಹ ಬಸ್ಸು ಇದು ಏಕಮಾತ್ರವಾಗಿತ್ತು. ೩ ರೂಪಾಯಿ ಉಳಿತಾಯವಾಗುತ್ತಿತ್ತು! ಒಂದು ವಾರ್ಷಿಕ ಪಾಸು ಸುಮಾರು ೭೦೦ ರೂಪಾಯಿಗಳಿಗೆ ಬಂದು ಬಿಡುತ್ತಿತ್ತು.
ಈಗ, ಮನಸ್ಸು ಬಂದಾಗ ಅಂತರ್ಜಾಲದಲ್ಲಿ ವಾಲ್ವೋ ಬಸ್ಸಿನ ಟಿಕೇಟನ್ನು, ೭೦೦ ರೂಪಾಯಿ ಕೊಟ್ಟು, ಕೊಂಡು ಪಯಣಿಸುತ್ತೇವೆ ಆದರೆ ಮುರುಕಲು ಬಸ್ಸಿನ ಮೇಲೆ ಮಿತ್ರರೊಡನೆ ಹರಟುತ್ತ ಸಾಗುವಾಗ ಸಿಗುತ್ತಿದ್ದ ಆನಂದ ಈಗ ವಿರಳ...
ಬೆಳಗಿನ ಜಾವ ಬಸ್ಸನ್ನೇರುವ ಸರ್ಕ್ ಸ್:
ದಾವಣಗೆರೆಯ ಬಾಪೂಜಿ ಕಾಲೇಜಿನಲ್ಲಿ ಓದುತ್ತಿರುವಾಗ ನಡೆಯುತ್ತಿದ್ದ ಪ್ರತಿ ದಿನದ ಸಾಹಸದ ಕೆಲಸ ಇದು! ನಮ್ಮೂರಿನಿಂದ (ಅಂದರೆ, ಹರಿಹರ) ಕಾಲೇಜಿಗೆ ನೇರವಾಗಿ ಹೋಗುವ ಒಂದು ಬಸ್ಸು ಇತ್ತು (ಈಗ ಸಹ ಇದೆ ಎಂದು ನನಗೆ ಕೇಳಿ ಬಂದಿದೆ). ಈ ಬಸ್ಸು ಬೆಳಗಿನ ಜಾವ ೭ - ೭.೧೫ರ ಒಳಗಡೆ ಹರಿಹರ ಬಸ್ ನಿಲ್ದಾಣಕ್ಕೆ ಬರುತ್ತಿತ್ತು. ಈ ಒಂದು ಬಸ್ಸನ್ನು ಅವಲಂಬಿಸಿದ್ದವರು ಹಲವಾರು ವಿದ್ಯಾರ್ಥಿಗಳು - ಪೀ.ಯೂ. ಕಾಲೇಜಿನಿಂದ ಹಿಡಿದು ಅನೇಕ ಡಿಗ್ರೀ ಕಾಲೇಜಿನ ಜನ ಇದನ್ನು ಹತ್ತೋರು. ಜನರ ಸಂಖ್ಯೆ ೩ ಬಸ್ಸುಗಳಿದ್ದರೂ ಸಾಕಾಗದಷ್ಟು ಇರುತ್ತಿತ್ತು. ಸೀಟು ಸಿಗುವ ವಿಷಯ ಆಚೆಯಿರಲಿ, ನಿಲ್ಲಲು ಜಾಗ ಸಿಗುವುದೇ ಒಂದು ದೊಡ್ಡ ಸಾಹಸವಾಗಿರುತ್ತಿತ್ತು. ಬಸ್ಸು ಹತ್ತಿರದ ಒಂದು ಹಳ್ಳಿಯೊಂದರಿಂದ ಬರುತ್ತಿದ್ದರಿಂದ ಅದರಲ್ಲಿ ಮೋತೀವೀರಪ್ಪ ಕಾಲೇಜಿನ ವಿದ್ಯಾರ್ಥಿಗಳು ಮೊದಲೇ ತುಂಬಿರುತ್ತಿದ್ದರು. ಉಳಿದ ಕೆಲವೇ ಸೀಟುಗಳಿಗಾಗಿ ನೂಕುನುಗ್ಗಲಾಟವಾಗುತ್ತಿತ್ತು. ಬಸ್ಸು ದೂರದಿಂದಲೇ ಬರುವುದನ್ನು ಗಮನಿಸಿ ಹುಡುಗರು ಬಸ್ಸಿನೋಡನೆ ಓಡಿ ಅದನ್ನೇರಲು ಸಜ್ಜಾಗುತ್ತಿದ್ದರು. ಬಸ್ಸು ಹತ್ತಿರ ಬಂತು ಅಂದಾಕ್ಷಣ ಅದರಲ್ಲಿಂದ ಇಳಿಯುವ ಜನರನ್ನು ಗಮನಿಸದೆ ನುಗ್ಗುತ್ತಿದ್ದರು. ಆ ಬಸ್ಸೋ ಒಂದು ಚಕ್ಕಡಿಗಾಡಿಗಿಂತಲೂ ಮೆಲ್ಲಗೆ ಚಲಿಸುತ್ತಿತ್ತು. ೧೨೦ ಕ್ಕೂ ಹೆಚ್ಚು ಜನರನ್ನು ಆ ಹಳೆಯ ಗಾಡಿ ಹೊತ್ತುಕೊಂಡು ಸಾಗುವಂತೆ ಮಾಡುತ್ತಿದ್ದ ಚಾಲಕನು ನಿಜವಾಗಿಯೂ ಚೆನ್ನಾಗಿ ಬಸ್ಸನ್ನು ಓಡಿಸುತ್ತಿದ್ದನೆನ್ನಬೇಕು.
ಬಸ್ಸನ್ನು ಏರುವುದು ಒಂದು ಸಾಹಸವಾದರೆ, ಅದರಲ್ಲಿ ನಿಲ್ಲುವುದು ಇನ್ನೊಂದು ಸಾಹಸ. ಒಬ್ಬರಿಗೊಬ್ಬರು ಮೈಯನ್ನು ಅಂಟಿಸಿ ನಿಲ್ಲದೆ ಬೇರೆಯ ವಿಧಿಯೇ ಇರಲಿಲ್ಲ. ಗಾಳಿಯಾಡದೆ, ಎಲ್ಲ ಬೆವೆತ ಮೈಗಳಿಂದ ಎಲ್ಲರ ಅಂಗಿಗಳು ಹಸಿ. ಬಸ್ಸಿನ ಸ್ಥಿತಿಯು ಅಷ್ಟೇನು ಚೆನ್ನಾಗಿರಲಿಲ್ಲ - ಮುರಿದು ಹೋದ ಕಿಟಕಿಗಳು, ಮುರಿದು ಬೀಳುವ ಅಂಚಿನಲ್ಲಿದ್ದ ಫೂಟ್-ರೆಸ್ಟ್, ತುಂಡಾಗಿದ್ದ ಬಸ್ಸಿನ ಮೇಲ್ಭಾಗ. ಇಷ್ಟೆಲ್ಲವಿದ್ದರೂ ಜನರು ಪ್ರತಿ ದಿನ ಈ ಬಸ್ಸಿಗಾಗಿ ಕಾಯುತ್ತಿದ್ದರು!
ಇಷ್ಟೆಲ್ಲ ಕಷ್ಟ ಪಡುವುದು ಬೇಕಿತ್ತೆ? ಸುಮ್ಮನೆ ದಾವಣಗೆರೆಗೆ ನೇರವಾಗಿ ಹೋಗಲು ಸೌಕರ್ಯವಿರಲಿಲ್ಲವೆ ಎಂದು ನಿಮಗೆ ಅನ್ನಿಸಿರಬಹುದು. ನಿಜ, ಬಸ್ಸುಗಳು ಸಾಕಷ್ಟು ಇದ್ದುವಾದರು, ನೇರವಾಗಿ ಕೇವಲ ಬಸ್ ಪಾಸನ್ನು ತೋರಿಸಿ ಕಾಲೇಜಿನವರೆಗೆ ಹೋಗಬಹುದಾದಂತಹ ಬಸ್ಸು ಇದು ಏಕಮಾತ್ರವಾಗಿತ್ತು. ೩ ರೂಪಾಯಿ ಉಳಿತಾಯವಾಗುತ್ತಿತ್ತು! ಒಂದು ವಾರ್ಷಿಕ ಪಾಸು ಸುಮಾರು ೭೦೦ ರೂಪಾಯಿಗಳಿಗೆ ಬಂದು ಬಿಡುತ್ತಿತ್ತು.
ಈಗ, ಮನಸ್ಸು ಬಂದಾಗ ಅಂತರ್ಜಾಲದಲ್ಲಿ ವಾಲ್ವೋ ಬಸ್ಸಿನ ಟಿಕೇಟನ್ನು, ೭೦೦ ರೂಪಾಯಿ ಕೊಟ್ಟು, ಕೊಂಡು ಪಯಣಿಸುತ್ತೇವೆ ಆದರೆ ಮುರುಕಲು ಬಸ್ಸಿನ ಮೇಲೆ ಮಿತ್ರರೊಡನೆ ಹರಟುತ್ತ ಸಾಗುವಾಗ ಸಿಗುತ್ತಿದ್ದ ಆನಂದ ಈಗ ವಿರಳ...
Thursday, May 13, 2010
ಹಾಳು ಹರಟೆ
ಸುಮ್ಮನೆ ಕೂತು ಏನೂ ಮಾಡದೆ ಹಾಗೆಯೆ ವಿಚಾರಗಳ ಲಹರಿಯನ್ನು ಮನದಲ್ಲಿ ಹರಿಬಿಟ್ಟು ಬಹಳ ದಿನಗಳಾಗಿದ್ದುವು; ಇಂದು ಸ್ವಲ್ಪ ಸಮಯ ಮಾಡ್ಕೊಂಡು ಕೂತಿದ್ದೀನಿ. ಎದ್ದು ಕಾಣುವ ಸಿಂಗಲ್ ಫ಼್ಯಾಮಿಲೀ ಪ್ಯಾಕ್ ಹೊಟ್ಟೆಯನ್ನು ನೇವರಿಸುತ್ತ ಅದನ್ನು ಕರಗಿಸುವ ಹಗಲುಗನಸುಗಳನ್ನು ಕಂಡದ್ದಾಯಿತು. ಸ್ವಲ್ಪ ಸಮಯದ ಕೆಳಗೆ ಅಮ್ಮ ಹಾಗು ಅಮ್ಮನ ತೊಡೆಯ ಮೇಲೆ ಮಲಗಿದಾಗ ಸಿಗುವ ಸಂತಸದ ಅರಿವನ್ನು ಮತ್ತೆ ಮೂಡಿಸಿದ ಒಂದು ಬ್ಲಾಗನ್ನು ಓದಿದೆ. ಚೆನ್ನಾಗಿದೆ - ನೀವು ಸಹ ಅದನ್ನು ಓದಿ ಆನಂದಿಸಬಹುದು : http://sampada.net/blog/harish-athreya/09/05/2010/25300
Saturday, December 26, 2009
ಅವಳು ಸಂತೋಷ ಪಡುವಳೇ?
ಬುದ್ಧಿವಂತ ಹುಡುಗ. ಒಳ್ಳೆಯ ಕೆಲಸ; ಅಪ್ಪ-ಅಮ್ಮನಿಂದ ದೂರದೂರಿನಲ್ಲಿ ಕೆಲಸ. ಆದರೆ, ಕನಿಷ್ಠ ತಿಂಗಳಿಗೊಮ್ಮೆ ಮನೆಗೆ ಹೋಗಿ ತಂದೆ-ತಾಯಿಯೊಡನೆ ಸಮಯ ಕಳೆದು ಮುಂಬರುವ ತಿಂಗಳ ಮನೆಯ ಪ್ರಯಾಣವನ್ನು ಕಾತರದಿಂದ ಕಾಯುತ್ತಿದ್ದ. ಕೆಲಸಕ್ಕೆ ಸೇರಿದಂದಿನಿಂದಲೂ ಪ್ರತಿ ದಿನ ಕತ್ತೆ ದುಡಿದಂತೆ ದುಡಿಯುತ್ತಿದ್ದ - ಜಗತ್ತಿನಲ್ಲಿ ಬದುಕಲು ಅಗತ್ಯವಾದ ಕಪಟ ಅವನು ಅರಿಯನು. ಜೀವನ ಒಂದು ಚಕ್ರದಂತೆ ಏನು ಬದಲಾವಣೆ ಇಲ್ಲದೆ ಹಾಗೆಯೇ ಸಾಗಿತ್ತು.
ಕೆಲಸಕ್ಕೆ ಸೇರಿ ೧ ವರ್ಷವಾಗಿತ್ತು - ಕೆಲಸ ತಕ್ಕ ಮಟ್ಟಿಗೆ ನಡೆಯುತ್ತಿತ್ತು. ಒಂದು ಒಳ್ಳೆಯ ಹುಡುಗಿಯನ್ನು ನೋಡಿದ್ದಾನೆ - ಅಪ್ಪ-ಅಮ್ಮಂಗೆ ಇಷ್ಟಾ ಆಗ್ತಾಳೆ ಅಂತ ಅವನಿಗೆ ಗೊತ್ತು - ಆದರೂ ಒಂದು ತೆರನೆಯ ಭಯ. ಭಯಕ್ಕೆ ಆಧಾರವಿಲ್ಲ - ಆದರೂ ಭಯ. ಸರಿಯಾದ ಸಮಯ ಬರಲೆಂದು ಕಾಯುತ್ತಿದ್ದ ಈ ವಿಷಯವನ್ನು ಅವರಿಗೆ ತಿಳಿಸುವುದಕ್ಕೆ! ಅಪ್ಪ-ಅಮ್ಮ ಖುಷಿಯಾಗಿರಬೇಕು ಅನ್ನುವ ಹರ-ಸಾಹಸ ಮಾಡುತ್ತಿದ್ದ ಹುಡುಗ - ವಿಶಿಷ್ಟ ಸಾಮಾನುಗಳ ಸುರಿಮಳೆಯೇ ಮಾಡುತ್ತಿದ್ದ. ಅಪ್ಪ-ಅಮ್ಮನ್ನ ದೇಶ-ವಿದೇಶ ತಿರುಗಾಡಿಸಿದ. ಆದರೆ ಅವನು ಹಲವಾರು ಬಾರಿ ಕೆಲಸದ ಮೇಲೆ ದೂರ ಪ್ರದೇಶಗಳಿಗೆ ಹೋಗುತ್ತಿದ್ದ - ಬಹಳ ಬಾರಿ ದೂರವಾಣಿಯ ಮೂಲಕ ಸಹ ಮಾತನಾಡಲಾಗುತ್ತಿರಲಿಲ್ಲ ಅವನಿಗೆ. ಬಹಳ ದಿನಗಳ ನಂತರ ಒಂದು ದಿನ ಅವನು ಮನೆಗೆ ಬಂದಿದ್ದ. ಮನೆಯಿಂದ ಕೆಲಸ ಮಾಡುವ ಸೌಲಭ್ಯ ಇದ್ದ ಕಾರಣ ಕೆಲಸವನ್ನು ಜೋತೆಗೆತ್ತಿಕೊಂಡು ಬಂದಿದ್ದ. ರಜೆಯ ದಿನವೂ ಕೆಲಸ ಮಾಡುತ್ತ ಅವನಿಗೆ ಅಪ್ಪ-ಅಮ್ಮನೊಡನೆ ಸರಿಯಾಗಿ ಮಾತನಾಡಲು ಸಹ ಆಗಲಿಲ್ಲ; ಇನ್ನೇನು ಇನ್ನೊಂದು ಘಂಟೆಯಲ್ಲಿ ತಿರುಗಿ ಹೊರಡಬೇಕು ಅನ್ನುವಷ್ಟರಲ್ಲಿ ಅಮ್ಮ ಅವನೊಡನೆ ಮಾತನಾಡಲು ಬಂದಳು... ಮಾತು-ಕಥೆ ನಡೆದದ್ದು ಹೀಗೆ...
ಅಮ್ಮ,"ಮಗಾ... ಯಾಕೋ ನಿಂಜೊತೆ ಇ ಸಲ ಮಾತಾಡ್ಲಿಕ್ಕೆ ಆಗ್ಲೇ ಇಲ್ಲ ನೋಡು... ಅಷ್ಟು ಕೆಲ್ಸಾನಾ? "
ಮಗ,"ಹೂನಮ್ಮ... ಬಹಳ ಕೆಲ್ಸಾ. ಮುಗಿಯೋದೇ ಇಲ್ಲ ಅನ್ನೋ ಅಷ್ಟು ಇದೆ."
ಅಮ್ಮ, ಕಸಿವಿಸಿಯಾಗಿ ನುಡಿದಳು,"ಈ ಕೆಲಸ ಮುಗಿಸಿಕೊಂಡೆ ಬರಬಹುದಿತ್ತಲ್ಲ? ಮನೆಗೆ ಬಂದಿದ್ದಿಯ - ಸ್ವಲ್ಪ ಸುಧಾರಿಸಿಕೊಳ್ಳಲೂ ಆಗಲಿಲ್ಲ ನಿನಗೆ ಈ ಬಾರಿ. ಹೋದ ಬಾರಿಯೂ ಹೀಗೆ ಹೇಳಿದ್ದೆ ನೀನು..."
ಮಗ,"ಕಂಪನಿಯವರು ಕೊಟ್ಟ ಕಾಸಿಗೆ ತಕ್ಕಂತೆ ದುಡಿಸಿಕೊಳ್ಳುತ್ತಾರೆ..."
ಅಮ್ಮ,"ದುಡಿಯಬೇಕು ನಿಜ... ಆದರೆ, ನಿನ್ನ ಅನ್ಯ ಮುಖ್ಯ ಕೆಲಸಗಳಿಗೇ ನಿನಗೆ ಸಮಯ ಸಿಗದಂತಾದರೆ ಅದೆಂತಹ ಕೆಲಸ ಮಗಾ?"
ಮಗ,"ನೀನು ಹೇಳುತ್ತಿರುವುದು ಸರಿಯಮ್ಮಾ. ಆದರೆ, ನಾವು ನಮ್ಮ ಇಂದಿನ ಬದುಕುವ ಶೈಲಿಗೆ ಅನುಗುಣವಾಗಿ ನಮ್ಮ ಖರ್ಚು-ವೆಚ್ಚಗಳು ಹೆಚ್ಚಿವೆ. ತಕ್ಕಂತೆ, ಅದನ್ನು ನಿಭಾಯಿಸಲು ಹೆಚ್ಚು ಕೆಲಸ ಮಾಡಬೇಕು."
ಅಮ್ಮ,"ನೆಮ್ಮದಿ ಇಲ್ಲದೆ, ದೇಹವನ್ನು ಅತಿವ್ರವಾಗಿ ದಂಡಿಸಿಕೊಳ್ಳುವುದರಿಂದ ನಿನ್ನ ಆರೋಗ್ಯ ಹದಗೆಟ್ಟಿ ಹೋಗುವುದು... ಯಾರ ಸಂತೋಷಕ್ಕಾಗಿ ಇದು?"
ಮಗ,"ನಿನ್ನ ಹಾಗು ಅಪ್ಪನಿಗಾಗಿ, ಅಮ್ಮ. ನೀನು-ಅಪ್ಪ ಇನ್ನಷ್ಟು ಜಗತ್ತನ್ನು ಸುತ್ತಿ ಆನಂದಿಸಬೇಕು; ಇರುವ ಹೊಸ ತಂತ್ರಜ್ಞಾನವನ್ನು ಸವಿಯಬೇಕು ಅನ್ನೋದು ನನ್ನ ಬಯಕೆ... ಯಾಕೆ, ನಿನಗೆ ಇದು ಸರಿ ಅನ್ಸಲ್ವಾ ಅಮ್ಮ?"
ಅಮ್ಮ,"ನನ್ನ ಕಂದಾ, ನಮಗಾಗಿ ನೀನು ಇಷ್ಟು ಕಷ್ಟ ಪಟ್ಟರೆ ನಮ್ಮಗೇ ನೆಮ್ಮದಿ ಸಿಗುವುದೇ? ಇಲ್ಲ... ಬದುಕಲು ನಾವು ಮಾಡಿಟ್ಟ ಸವಲತ್ತುಗಳು ತಕ್ಕ ಮಟ್ಟಿಗೆ ಇವೆ. ಆದರೆ ನಮಗೆ ನಿಜವಾದ ಸಂತೋಷ ನಿನ್ನನ್ನು ಕಂಡಾಗ, ನಿನ್ನೊಡನೆ ಮಾತನಾಡಿದಾಗ ಆಗೊತ್ತೆ. ಬೇರೆ ಯಾವುದು ಸಹ ನಮಗೆ ಬೇಡ. ಬೇಕಾಗಿರುವುದು ನಿನ್ನ ಸಾಮೀಪ್ಯ - ಇದು ಸಾಧ್ಯವಾಗದ ಪಕ್ಷದಲ್ಲಿ, ನಿನ್ನ ದನಿಯನ್ನಾದರು ಕೇಳಿಸು - ಅದನ್ನು ಕೇಳಿದರೆ ನನಗೆ ಒಂದು ತೆರನೆಯ ಸಮಾಧಾನ ಆಗುತ್ತದಪ್ಪ."
ಮಗ ಮಾತನಾಡಲಿಲ್ಲ. ಎನೆನ್ನಬೇಕೆಂದು ಅವನಿಗೆ ತೋಚಲಿಲ್ಲ.
ಅಮ್ಮ ಮಾತನ್ನು ಮುಂದೆ ವರೆಸಿದಳು,"ನಿನ್ನ ಮದುವೆಯ ವಿಷಯ ಮಾತನಾಡಬೇಕಿತ್ತು. ಯಾವುದಾದರು ಹುಡುಗಿಯನ್ನು ನೋಡಿದ್ದೀಯಾ?"
ಮತ್ತೆ ಮೌನ ಆವರಿಸಿತು. ಮಗ, ತನ್ನ ಕೆಲಸವನ್ನು ಅಲ್ಲಿಯೇ ನಿಲ್ಲಿಸಿ ಹದಿನೈದು ನಿಮಿಷಗಳಾಗಿದ್ದವು.
ಅಮ್ಮ ಮಾತನ್ನು ಬೆಳೆಸಿದಳು,"ಹುಡುಗಿ ಹೇಗಿದ್ದಾಳೆ ನೋಡೋಕ್ಕೆ?"
ಮಗ,"ಅವಳ ಹೆಸರು ಅನನ್ಯಾ... ನನ್ನ ಸಹೋದ್ಯೋಗಿ. ಒಳ್ಳೆಯ ಹುಡುಗಿ. ಇದನ್ನು ನಿಮಗೆ ಸರಿಯಾದ ಸಮಯಕ್ಕೆ ಹೇಳೋಣ ಅಂತ ಕಾಯ್ತಿದ್ದೆ..."
ಅಮ್ಮ,"ಚೆನ್ನಾಗಿದೆ ಹೆಸರು... ನಾವು ಅವಳನ್ನು ನೋಡಬೇಕಲ್ಲ"
ಮಗನ ಮುಖ ಸಂತಸದಿಂದ ಅರಳಿತು.
ಕೆಲಸಕ್ಕೆ ಸೇರಿ ೧ ವರ್ಷವಾಗಿತ್ತು - ಕೆಲಸ ತಕ್ಕ ಮಟ್ಟಿಗೆ ನಡೆಯುತ್ತಿತ್ತು. ಒಂದು ಒಳ್ಳೆಯ ಹುಡುಗಿಯನ್ನು ನೋಡಿದ್ದಾನೆ - ಅಪ್ಪ-ಅಮ್ಮಂಗೆ ಇಷ್ಟಾ ಆಗ್ತಾಳೆ ಅಂತ ಅವನಿಗೆ ಗೊತ್ತು - ಆದರೂ ಒಂದು ತೆರನೆಯ ಭಯ. ಭಯಕ್ಕೆ ಆಧಾರವಿಲ್ಲ - ಆದರೂ ಭಯ. ಸರಿಯಾದ ಸಮಯ ಬರಲೆಂದು ಕಾಯುತ್ತಿದ್ದ ಈ ವಿಷಯವನ್ನು ಅವರಿಗೆ ತಿಳಿಸುವುದಕ್ಕೆ! ಅಪ್ಪ-ಅಮ್ಮ ಖುಷಿಯಾಗಿರಬೇಕು ಅನ್ನುವ ಹರ-ಸಾಹಸ ಮಾಡುತ್ತಿದ್ದ ಹುಡುಗ - ವಿಶಿಷ್ಟ ಸಾಮಾನುಗಳ ಸುರಿಮಳೆಯೇ ಮಾಡುತ್ತಿದ್ದ. ಅಪ್ಪ-ಅಮ್ಮನ್ನ ದೇಶ-ವಿದೇಶ ತಿರುಗಾಡಿಸಿದ. ಆದರೆ ಅವನು ಹಲವಾರು ಬಾರಿ ಕೆಲಸದ ಮೇಲೆ ದೂರ ಪ್ರದೇಶಗಳಿಗೆ ಹೋಗುತ್ತಿದ್ದ - ಬಹಳ ಬಾರಿ ದೂರವಾಣಿಯ ಮೂಲಕ ಸಹ ಮಾತನಾಡಲಾಗುತ್ತಿರಲಿಲ್ಲ ಅವನಿಗೆ. ಬಹಳ ದಿನಗಳ ನಂತರ ಒಂದು ದಿನ ಅವನು ಮನೆಗೆ ಬಂದಿದ್ದ. ಮನೆಯಿಂದ ಕೆಲಸ ಮಾಡುವ ಸೌಲಭ್ಯ ಇದ್ದ ಕಾರಣ ಕೆಲಸವನ್ನು ಜೋತೆಗೆತ್ತಿಕೊಂಡು ಬಂದಿದ್ದ. ರಜೆಯ ದಿನವೂ ಕೆಲಸ ಮಾಡುತ್ತ ಅವನಿಗೆ ಅಪ್ಪ-ಅಮ್ಮನೊಡನೆ ಸರಿಯಾಗಿ ಮಾತನಾಡಲು ಸಹ ಆಗಲಿಲ್ಲ; ಇನ್ನೇನು ಇನ್ನೊಂದು ಘಂಟೆಯಲ್ಲಿ ತಿರುಗಿ ಹೊರಡಬೇಕು ಅನ್ನುವಷ್ಟರಲ್ಲಿ ಅಮ್ಮ ಅವನೊಡನೆ ಮಾತನಾಡಲು ಬಂದಳು... ಮಾತು-ಕಥೆ ನಡೆದದ್ದು ಹೀಗೆ...
ಅಮ್ಮ,"ಮಗಾ... ಯಾಕೋ ನಿಂಜೊತೆ ಇ ಸಲ ಮಾತಾಡ್ಲಿಕ್ಕೆ ಆಗ್ಲೇ ಇಲ್ಲ ನೋಡು... ಅಷ್ಟು ಕೆಲ್ಸಾನಾ? "
ಮಗ,"ಹೂನಮ್ಮ... ಬಹಳ ಕೆಲ್ಸಾ. ಮುಗಿಯೋದೇ ಇಲ್ಲ ಅನ್ನೋ ಅಷ್ಟು ಇದೆ."
ಅಮ್ಮ, ಕಸಿವಿಸಿಯಾಗಿ ನುಡಿದಳು,"ಈ ಕೆಲಸ ಮುಗಿಸಿಕೊಂಡೆ ಬರಬಹುದಿತ್ತಲ್ಲ? ಮನೆಗೆ ಬಂದಿದ್ದಿಯ - ಸ್ವಲ್ಪ ಸುಧಾರಿಸಿಕೊಳ್ಳಲೂ ಆಗಲಿಲ್ಲ ನಿನಗೆ ಈ ಬಾರಿ. ಹೋದ ಬಾರಿಯೂ ಹೀಗೆ ಹೇಳಿದ್ದೆ ನೀನು..."
ಮಗ,"ಕಂಪನಿಯವರು ಕೊಟ್ಟ ಕಾಸಿಗೆ ತಕ್ಕಂತೆ ದುಡಿಸಿಕೊಳ್ಳುತ್ತಾರೆ..."
ಅಮ್ಮ,"ದುಡಿಯಬೇಕು ನಿಜ... ಆದರೆ, ನಿನ್ನ ಅನ್ಯ ಮುಖ್ಯ ಕೆಲಸಗಳಿಗೇ ನಿನಗೆ ಸಮಯ ಸಿಗದಂತಾದರೆ ಅದೆಂತಹ ಕೆಲಸ ಮಗಾ?"
ಮಗ,"ನೀನು ಹೇಳುತ್ತಿರುವುದು ಸರಿಯಮ್ಮಾ. ಆದರೆ, ನಾವು ನಮ್ಮ ಇಂದಿನ ಬದುಕುವ ಶೈಲಿಗೆ ಅನುಗುಣವಾಗಿ ನಮ್ಮ ಖರ್ಚು-ವೆಚ್ಚಗಳು ಹೆಚ್ಚಿವೆ. ತಕ್ಕಂತೆ, ಅದನ್ನು ನಿಭಾಯಿಸಲು ಹೆಚ್ಚು ಕೆಲಸ ಮಾಡಬೇಕು."
ಅಮ್ಮ,"ನೆಮ್ಮದಿ ಇಲ್ಲದೆ, ದೇಹವನ್ನು ಅತಿವ್ರವಾಗಿ ದಂಡಿಸಿಕೊಳ್ಳುವುದರಿಂದ ನಿನ್ನ ಆರೋಗ್ಯ ಹದಗೆಟ್ಟಿ ಹೋಗುವುದು... ಯಾರ ಸಂತೋಷಕ್ಕಾಗಿ ಇದು?"
ಮಗ,"ನಿನ್ನ ಹಾಗು ಅಪ್ಪನಿಗಾಗಿ, ಅಮ್ಮ. ನೀನು-ಅಪ್ಪ ಇನ್ನಷ್ಟು ಜಗತ್ತನ್ನು ಸುತ್ತಿ ಆನಂದಿಸಬೇಕು; ಇರುವ ಹೊಸ ತಂತ್ರಜ್ಞಾನವನ್ನು ಸವಿಯಬೇಕು ಅನ್ನೋದು ನನ್ನ ಬಯಕೆ... ಯಾಕೆ, ನಿನಗೆ ಇದು ಸರಿ ಅನ್ಸಲ್ವಾ ಅಮ್ಮ?"
ಅಮ್ಮ,"ನನ್ನ ಕಂದಾ, ನಮಗಾಗಿ ನೀನು ಇಷ್ಟು ಕಷ್ಟ ಪಟ್ಟರೆ ನಮ್ಮಗೇ ನೆಮ್ಮದಿ ಸಿಗುವುದೇ? ಇಲ್ಲ... ಬದುಕಲು ನಾವು ಮಾಡಿಟ್ಟ ಸವಲತ್ತುಗಳು ತಕ್ಕ ಮಟ್ಟಿಗೆ ಇವೆ. ಆದರೆ ನಮಗೆ ನಿಜವಾದ ಸಂತೋಷ ನಿನ್ನನ್ನು ಕಂಡಾಗ, ನಿನ್ನೊಡನೆ ಮಾತನಾಡಿದಾಗ ಆಗೊತ್ತೆ. ಬೇರೆ ಯಾವುದು ಸಹ ನಮಗೆ ಬೇಡ. ಬೇಕಾಗಿರುವುದು ನಿನ್ನ ಸಾಮೀಪ್ಯ - ಇದು ಸಾಧ್ಯವಾಗದ ಪಕ್ಷದಲ್ಲಿ, ನಿನ್ನ ದನಿಯನ್ನಾದರು ಕೇಳಿಸು - ಅದನ್ನು ಕೇಳಿದರೆ ನನಗೆ ಒಂದು ತೆರನೆಯ ಸಮಾಧಾನ ಆಗುತ್ತದಪ್ಪ."
ಮಗ ಮಾತನಾಡಲಿಲ್ಲ. ಎನೆನ್ನಬೇಕೆಂದು ಅವನಿಗೆ ತೋಚಲಿಲ್ಲ.
ಅಮ್ಮ ಮಾತನ್ನು ಮುಂದೆ ವರೆಸಿದಳು,"ನಿನ್ನ ಮದುವೆಯ ವಿಷಯ ಮಾತನಾಡಬೇಕಿತ್ತು. ಯಾವುದಾದರು ಹುಡುಗಿಯನ್ನು ನೋಡಿದ್ದೀಯಾ?"
ಮತ್ತೆ ಮೌನ ಆವರಿಸಿತು. ಮಗ, ತನ್ನ ಕೆಲಸವನ್ನು ಅಲ್ಲಿಯೇ ನಿಲ್ಲಿಸಿ ಹದಿನೈದು ನಿಮಿಷಗಳಾಗಿದ್ದವು.
ಅಮ್ಮ ಮಾತನ್ನು ಬೆಳೆಸಿದಳು,"ಹುಡುಗಿ ಹೇಗಿದ್ದಾಳೆ ನೋಡೋಕ್ಕೆ?"
ಮಗ,"ಅವಳ ಹೆಸರು ಅನನ್ಯಾ... ನನ್ನ ಸಹೋದ್ಯೋಗಿ. ಒಳ್ಳೆಯ ಹುಡುಗಿ. ಇದನ್ನು ನಿಮಗೆ ಸರಿಯಾದ ಸಮಯಕ್ಕೆ ಹೇಳೋಣ ಅಂತ ಕಾಯ್ತಿದ್ದೆ..."
ಅಮ್ಮ,"ಚೆನ್ನಾಗಿದೆ ಹೆಸರು... ನಾವು ಅವಳನ್ನು ನೋಡಬೇಕಲ್ಲ"
ಮಗನ ಮುಖ ಸಂತಸದಿಂದ ಅರಳಿತು.
ತುರಿಮಣೆ-ತರಕಾರಿಗೂ ರಸ್ತೆ-ಲಾರಿಗೂ ಏನು ಸಂಬಂಧ?!
ಏನು ಸಂಬಂಧ ಅಂತೀರಾ? ಇದೆ! ಆದರೆ ಅದನ್ನು ತುರೆಮಣೆ ಉಪಯೋಗಿಸಿದವರೇ ಹೇಳಬಹುದು. ಹೇಗೆ ಅಂತೀರಾ?
ಒಮ್ಮೆ ಬದನೇಕಾಯಿಯನ್ನು ತುರೆಮಣೆಯ ಮೇಲೆ ಚಕ್ರಾಕೃತಿಯಾಗಿ ಕೊಯ್ದು ನೋಡಿ - ಪ್ರತಿಯೊಂದು ಹೊಡೆತದಲ್ಲಿ ಒಂದು ತುಂಡು ಆಗಬೇಕು; ಮತ್ತೊಮ್ಮೆ ಕೊಯ್ಯಿರಿ... ಆಗುವ ಶಬ್ಧವನ್ನು ಹುಷಾರಾಗಿ ಆಲಿಸಿ... ಈಗ ನೀವು ಒಂದು ಕಾರೊಂದರಲ್ಲಿ ಹೋಗುತ್ತಿದ್ದಿರ ಅಂದುಕೊಳ್ಳಿ... ಅಂದುಕೊಳ್ಳುವುದೇಕೆ, ಹೋಗಿಯೇ ಬಿಡಿ. ಯಾವುದಾದರು ರಾಷ್ಟ್ರೀಯ ಹೆದ್ದಾರಿಯನ್ನು ಹಿಡಿದು ಘಂಟೆಗೆ ೬೦ ಕಿ.ಮೀ. ಅನ್ನು ಮೀರಿದ ವೇಗದಲ್ಲಿ ಚಲಿಸಿ. ಹೀಗೆ ಹೋಗುತ್ತಿರುವಾಗ, ಎದುರುಗಡೆಯಿಂದ ಬರುತ್ತಿರುವ ಲಾರಿಗಳು ನಿಮ್ಮ ಗಾಡಿಯನ್ನು ದಾಟುತ್ತಿರುವಾಗ ಆಗುವ ಶಬ್ಧವನ್ನು ಗಮನಿಸಿ. ವ್ಯತ್ಯಾಸ ನಿಮಗೆ ಗೊತ್ತಾಗಿಬಿಡುವುದು.
ಒಮ್ಮೆ ಬದನೇಕಾಯಿಯನ್ನು ತುರೆಮಣೆಯ ಮೇಲೆ ಚಕ್ರಾಕೃತಿಯಾಗಿ ಕೊಯ್ದು ನೋಡಿ - ಪ್ರತಿಯೊಂದು ಹೊಡೆತದಲ್ಲಿ ಒಂದು ತುಂಡು ಆಗಬೇಕು; ಮತ್ತೊಮ್ಮೆ ಕೊಯ್ಯಿರಿ... ಆಗುವ ಶಬ್ಧವನ್ನು ಹುಷಾರಾಗಿ ಆಲಿಸಿ... ಈಗ ನೀವು ಒಂದು ಕಾರೊಂದರಲ್ಲಿ ಹೋಗುತ್ತಿದ್ದಿರ ಅಂದುಕೊಳ್ಳಿ... ಅಂದುಕೊಳ್ಳುವುದೇಕೆ, ಹೋಗಿಯೇ ಬಿಡಿ. ಯಾವುದಾದರು ರಾಷ್ಟ್ರೀಯ ಹೆದ್ದಾರಿಯನ್ನು ಹಿಡಿದು ಘಂಟೆಗೆ ೬೦ ಕಿ.ಮೀ. ಅನ್ನು ಮೀರಿದ ವೇಗದಲ್ಲಿ ಚಲಿಸಿ. ಹೀಗೆ ಹೋಗುತ್ತಿರುವಾಗ, ಎದುರುಗಡೆಯಿಂದ ಬರುತ್ತಿರುವ ಲಾರಿಗಳು ನಿಮ್ಮ ಗಾಡಿಯನ್ನು ದಾಟುತ್ತಿರುವಾಗ ಆಗುವ ಶಬ್ಧವನ್ನು ಗಮನಿಸಿ. ವ್ಯತ್ಯಾಸ ನಿಮಗೆ ಗೊತ್ತಾಗಿಬಿಡುವುದು.
Monday, December 21, 2009
ಹ್ಯಾಂಗ ಬೇ...?
ಪ್ರದೇಶದಿಂದ ಪ್ರದೇಶಕ್ಕೆ ಕನ್ನಡ ಭಾಷೆಯಲ್ಲಿ ಬಹಳಷ್ಟು ವ್ಯತ್ಯಾಸ ಕಾಣಬಹುದು. ಇಂತಹದ್ದೊಂದು ಅಚ್ಚರಿಯ ಸಂಗತಿ ನಾನು ಚಿಕ್ಕವನಿದ್ದಾಗ ನಡೆದಿತ್ತು. ಬೇಸಿಗೆಯ ರಜೆಯ ಸಮಯ ಅಜ್ಜಿಯ ಮನೆಗೆ ಹೋಗುವುದೆಂದರೆ ವಿಜಯ ಹಾಗು ನನಗೆ ಬಹಳ ಸಂತಸದ ಸಂಗತಿ. ಅಮ್ಮ ನಮ್ಮಿಬ್ಬರನ್ನು ಧಾರವಾಡದಲ್ಲಿರುವ ಅಜ್ಜಿಯ ಮನೆಗೆ ಕರೆದೊಯ್ದು ಕೆಲ ದಿನ ಅಲ್ಲಿ ನಮ್ಮೊಡನೆ ಇದ್ದು ಹರಿಹರಕ್ಕೆ ಹಿಂದಿರುಗುವುದು ಸಾಮಾನ್ಯವಾಗಿತ್ತು. ಅಜ್ಜಿಯ ಮನೆಯಲ್ಲಿ ನಮ್ಮ ಅತ್ತೆ - ಮಾಮಾ ಜೊತೆ ಕಾಲ ಕಳೆಯಲು ಸಿಗುತ್ತಿದ್ದುದು ನಮಗೆ ಖುಷಿಯ ಸಂಗತಿಯಾಗಿತ್ತು. ಹೀಗೆ ಒಂದು ದಿನ ಅತ್ತೆಯೊಡನೆ ತರಕಾರಿ ಮಾರುಕಟ್ಟೆಗೆ ಹೋದಾಗ ಅತ್ತೆ ತರಕಾರಿ ಕೊಳ್ಳುತ್ತಿದ್ದನ್ನು ಗಮನಿಸುತ್ತಿದ್ದೆ...
ಅತ್ತೆ, ತರಕಾರಿ ಮಾರುವವಳನ್ನು ಕುರಿತು, "ಹಾಗಲ ಕಾಯಿ ಹ್ಯಾಗೆ?"
ತರಕಾರಿಯವಳು ಸುಮಾರು ೨೫ ~ ೩೦ ವರ್ಷ ವಯಸ್ಸಿನ ಹೆಂಗಸು. ಅದಕ್ಕವಳು, "ಎಷ್ಟು ಬೆಕಬೆ?", ಅಂದಳು.
ಇದನ್ನು ಕೇಳಿ ನನಗೆ ಏನು ಅರ್ಥವಾಗಲಿಲ್ಲ -ಆದರೆ ಯಾಕೋ ಅದು ವಿಚಿತ್ರ ಎನಿಸಿತು. ಹಾಗಲಕಾಯಿ ತುಟ್ಟಿಯಾಯಿತು ಎಂದು ಅತ್ತೆ ಮುನ್ನಡೆದರು.
ಬೇರೆಯ ತರಕಾರಿಯವಳನ್ನು ಕುರಿತು ಅತ್ತೆ, "ಹ್ಯಾಂಗ್ ಬೇ ಈ ಬೆಂಡೀಕಾಯ್?"
ತರಕಾರಿಯವಳು, "ಪಾವ್ ಕಿಲೋ ಯಾಡ್ ರುಪಾಯಿ"
ಅತ್ತೆ, "ಅರ್ಧ ಕಿಲೋ ಬೇಕ್ - ಹ್ಯಾಗ್ ಕೊಡ್ತಿ ?"
ತರಕಾರಿಯವಳು, "ನಾಲ್ಕು ರುಪಾಯಿಗೆ ಅರ್ಧ ತಗೋ ಬೇ"
ಅತ್ತೆ, "ಅರ್ಧ ಕಿಲೋ ಮೂರು ರೂಪಾಯಿ ಇಲ್ಲ?"
ತರಕಾರಿಯವಳು, "ತಗೋರಿ..."
ಸ್ವಲ್ಪ ಹೊತ್ತಿನಲ್ಲಿ ಪೂರ್ತಿ ಮಾರುಕಟ್ಟೆಯನ್ನು ಜಾಲಾಡಿ ಆಗಿತ್ತು. ಮನೆಗೆ ಮರಳಿದೆವು.
ಆಮೇಲೆ ಸ್ವಲ್ಪ ಧೈರ್ಯ ಮಾಡಿ ಅತ್ತೆಯನ್ನು ಕೇಳಿದೆ, "ಏನಬೆ... ಅಂತ ಅಂದ್ರೆ ಏನು?"
ನನ್ನ ವಿಚಾರ ಧಾರೆ ಯಾವೆಡೆ ಸಾಗುತ್ತಿದೆ ಎಂದು ಅರಿತ ಅವರು ಹೀಗೆಂದರು,"ಇಲ್ಲಿ ಅಬ್ಬೆ ಅಂದ್ರೆ ನಿಮ್ಮಲ್ಲಿ ಅಮ್ಮ ಅಂದ ಹಾಗೆ!"
ಸ್ವಲ್ಪ ಸಮಾಧಾನವಾಯಿತು - ಅಬ್ಬೆ ಅಂದ್ರೆ ನಾನು ಮೊದಲು ಅಂದುಕೊಂಡ ಹಾಗೆ ಬೈಗುಳ ಅಲ್ಲ ಅಂದು ಗೊತ್ತಾಗಿ.
ಕನ್ನಡ-ಹಿಂದಿ-ಇಂಗ್ಲಿಷ್ ಎಲ್ಲವನ್ನು ಮೊಸರುಬಜ್ಜಿ ಮಾಡಿದ ಹಾಗೆ ಕಲೆಸಿ ಮಾತಾಡುವ ಮಂದಿ ಅಕ್ಕ ಪಕ್ಕ ಇದ್ದಿದ್ದರಿಂದಲೋ ಏನೋ ನನಗೆ ಈ ಸಂದೇಹ ಬಂದಿದ್ದು.
ಅತ್ತೆ, ತರಕಾರಿ ಮಾರುವವಳನ್ನು ಕುರಿತು, "ಹಾಗಲ ಕಾಯಿ ಹ್ಯಾಗೆ?"
ತರಕಾರಿಯವಳು ಸುಮಾರು ೨೫ ~ ೩೦ ವರ್ಷ ವಯಸ್ಸಿನ ಹೆಂಗಸು. ಅದಕ್ಕವಳು, "ಎಷ್ಟು ಬೆಕಬೆ?", ಅಂದಳು.
ಇದನ್ನು ಕೇಳಿ ನನಗೆ ಏನು ಅರ್ಥವಾಗಲಿಲ್ಲ -ಆದರೆ ಯಾಕೋ ಅದು ವಿಚಿತ್ರ ಎನಿಸಿತು. ಹಾಗಲಕಾಯಿ ತುಟ್ಟಿಯಾಯಿತು ಎಂದು ಅತ್ತೆ ಮುನ್ನಡೆದರು.
ಬೇರೆಯ ತರಕಾರಿಯವಳನ್ನು ಕುರಿತು ಅತ್ತೆ, "ಹ್ಯಾಂಗ್ ಬೇ ಈ ಬೆಂಡೀಕಾಯ್?"
ತರಕಾರಿಯವಳು, "ಪಾವ್ ಕಿಲೋ ಯಾಡ್ ರುಪಾಯಿ"
ಅತ್ತೆ, "ಅರ್ಧ ಕಿಲೋ ಬೇಕ್ - ಹ್ಯಾಗ್ ಕೊಡ್ತಿ ?"
ತರಕಾರಿಯವಳು, "ನಾಲ್ಕು ರುಪಾಯಿಗೆ ಅರ್ಧ ತಗೋ ಬೇ"
ಅತ್ತೆ, "ಅರ್ಧ ಕಿಲೋ ಮೂರು ರೂಪಾಯಿ ಇಲ್ಲ?"
ತರಕಾರಿಯವಳು, "ತಗೋರಿ..."
ಸ್ವಲ್ಪ ಹೊತ್ತಿನಲ್ಲಿ ಪೂರ್ತಿ ಮಾರುಕಟ್ಟೆಯನ್ನು ಜಾಲಾಡಿ ಆಗಿತ್ತು. ಮನೆಗೆ ಮರಳಿದೆವು.
ಆಮೇಲೆ ಸ್ವಲ್ಪ ಧೈರ್ಯ ಮಾಡಿ ಅತ್ತೆಯನ್ನು ಕೇಳಿದೆ, "ಏನಬೆ... ಅಂತ ಅಂದ್ರೆ ಏನು?"
ನನ್ನ ವಿಚಾರ ಧಾರೆ ಯಾವೆಡೆ ಸಾಗುತ್ತಿದೆ ಎಂದು ಅರಿತ ಅವರು ಹೀಗೆಂದರು,"ಇಲ್ಲಿ ಅಬ್ಬೆ ಅಂದ್ರೆ ನಿಮ್ಮಲ್ಲಿ ಅಮ್ಮ ಅಂದ ಹಾಗೆ!"
ಸ್ವಲ್ಪ ಸಮಾಧಾನವಾಯಿತು - ಅಬ್ಬೆ ಅಂದ್ರೆ ನಾನು ಮೊದಲು ಅಂದುಕೊಂಡ ಹಾಗೆ ಬೈಗುಳ ಅಲ್ಲ ಅಂದು ಗೊತ್ತಾಗಿ.
ಕನ್ನಡ-ಹಿಂದಿ-ಇಂಗ್ಲಿಷ್ ಎಲ್ಲವನ್ನು ಮೊಸರುಬಜ್ಜಿ ಮಾಡಿದ ಹಾಗೆ ಕಲೆಸಿ ಮಾತಾಡುವ ಮಂದಿ ಅಕ್ಕ ಪಕ್ಕ ಇದ್ದಿದ್ದರಿಂದಲೋ ಏನೋ ನನಗೆ ಈ ಸಂದೇಹ ಬಂದಿದ್ದು.
Monday, December 14, 2009
ಅವನು ನಿನಗೆ ಗೊತ್ತಾ??
ನವೆಂಬೆರ್ - ಡಿಸೆಂಬರ್ ೨೦೦೭ ಇರಬೇಕು ಅದು... ಸರಿಯಾಗಿ ನೆನಪಿಲ್ಲ ಆದರೆ ರಜೆ ಇದ್ದ ಕಾರಣ ಮನೆಗೆ ಹೋಗುತ್ತಿದ್ದದ್ದು ನೆನಪಿದೆ. ಇಬ್ಬರು ಸಹಪಾಠಿಗಳು, ವಿಜಯ ಹಾಗು ನಾನು ಬೆಂಗಳೂರಿನ ಬಸ್ ತಂಗುದಾಣದಲ್ಲಿ ನಮ್ಮ ಬಸ್ಸು ಬರುವ ಹಾದಿಯನ್ನು ಕಾಯುತ್ತ ಕುಳಿತಿದ್ದೆವು. ಎಂದಿನಂತೆ, ಜನ ತುಂಬಿ ತುಳುಕಾಡುತ್ತಿದ್ದ ಆ ಜಾಗ ನನ್ನ ಕಣ್ಣುಗಳಿಗೆ ಏನು ಹೊಸತನ್ನು ತಂದಿರಲಿಲ್ಲ. ಅಷ್ಟರಲ್ಲಿ ನಮ್ಮ ಬಸ್ಸು ಬಂದೇ ಬಿಟ್ಟಿತು. ಬೇಸರ ಕಳೆದು ಈಗ ಸುಮ್ಮನೆ ಮಲಗಬಹುದು ಅಂದುಕೊಂಡು ಬಸ್ಸು ಹತ್ತಲು ಅಣಿಯಾದೆ. ಅಷ್ಟರಲ್ಲಿ ನಡೆದ ಈ ಘಟನೆ ನನಗೆ ಅಚ್ಕಾರಿಯನ್ನು ಮೂಡಿಸಿತು.
ಬಸ್ಸು ಹತ್ತಲು ನಾನು ಹೋಗುತ್ತಿದಂತೆ ನನ್ನ ಮುಂದೆ ನಡೆಯುತ್ತಿದ್ದ ನನ್ನ ಸಹಪಾಠಿಯನ್ನು ನನ್ನ ಪಕ್ಕದಲ್ಲಿಯೇ ನಡೆದುಕೊಂಡು ಬರುತ್ತಿದ್ದ ಹುಡುಗನೊಬ್ಬ ಮಾತನಾಡಿಸಿದ. ಮಾತು-ಕಥೆ ಹೀಗೆ ನಡೆಯಿತು...
ಅವನಂದ, "ಒಹ್! ನೀವು !@# ಹೈಸ್ಕೂಲಿನಲ್ಲಿ ಓದಿದ್ದು ಅಲ್ವಾ? ನಾನು ಶ್ರೀನಿವಾಸ... ನೆನಪಿದೆ ನಾ? ನಾನು ಅದೇ ಹೈಸ್ಕೂಲಿನಲ್ಲಿ ಓದಿದ್ದು . ನಿಮ್ಮದೇ ಬ್ಯಾಚು... ನೀವು @#& ಅಲ್ಲ?"
ಅವಳು (ಮುಖದಲ್ಲಿ ಮುಗುಳ್ನಗು... ಬಹಳ ಪರಿಚಯದವರನ್ನು ಮಾತನಾಡಿಸುವಂತೆ),"ಹೌದು. ನೀವು ಹೇಗಿದ್ದೀರಾ? ..."
ಅದಕ್ಕವನು, "ನಾನು ಚೆನ್ನಾಗಿದ್ದೀನಿ... ನೀವು ಎಲ್ಲಿ ಕೆಲ್ಸಾ ಮಾಡ್ತಿದ್ದೀರ? "
"ನಾನು *&%$#@ಯಲ್ಲಿ ಹೋದ ತಿಂಗಳು ಸೇರಿಕೊಂಡೆ..."
"ಎಲ್ಲಿ.. ದಾವಣಗೆರೆಗೆ ಹೊರಟಿದ್ದೀರಾ?"
"ಹೌದು... ನೀವು?"
.....
ಮಾತು ಸುಮಾರು ೧೦ ನಿಮಿಷ ನಡೆಯಿತು.. ಅಷ್ಟರಲ್ಲಿ ನಾನು ಬಸ್ಸನ್ನೇರಿ, ನನ್ನ ಜಾಗವನ್ನು ಹುಡುಕಿಕೊಂಡು ಮಲಗಲು ಅಣಿಯಾದೆ... ಸ್ವಲ್ಪ ಸಮಯದ ನಂತರ ಅವಳು ನನ್ನ ಎದುರಿನ ಸೀಟಿನ ಮೇಲೆ ಕುಳಿತಾಗ ಕೇಳಿದೆ,"ನಿನಗೆ ಅವನು ಗೊತ್ತಿದ್ದಾನೇನೆ?"
ಅದಕ್ಕವಳು, "ಇಲ್ಲ! ಅವನು ಯಾರು ಅಂತಾ ನನಗೆ ಗೊತ್ತಿಲ್ಲ!", ಅನ್ನಬೇಕೆ?
ನಾನು, "ಗೊತ್ತಿಲ್ಲವಾ? ಮತ್ತೆ ಇಷ್ಟು ಹೊತ್ತು ಪೂರ್ತಿ ಪಿರಿಚಯದವರಂತೆ ಮಾತನಾಡಿಸಿದೆ?"
ಅವಳು, "ಇಲ್ಲಪ್ಪ... ಅವನು ಅಷ್ಟು ನೆನಪಿಸಿಕೊಂಡು ನನ್ನನ್ನು ಗುರುತಿಸಿದ... ಆದರೆ ನನಗೆ ಅವನ್ಯಾರು ಅಂತ ನೆನಪಿಲ್ಲ... ಪಾಪ ಬೇಜಾರು ಮಾಡ್ಕೋತಾನೆ ಅಂತ ಮಾತಾಡ್ಸಿದೆ..", ಅಂದಳು.
ನನಗೆ ಇನ್ನೂ ಅರ್ಥವಾಗದ ವಿಷಯವಿದು - ಅಪರಿಚಿತರು ಬಂದು ನಾನು ಇಂಥವನು ಅಂತ ನನಗ್ಯಾರಾದರು ಹೇಳಿದ್ದಿದ್ದರೆ, ನನಗೆ ನೆನಪಿಲ್ಲದ ಪಕ್ಷದಲ್ಲಿ ನಾನು "ನೀವು ಯಾರು ಅಂತ ನನಗೆ ನೆನಪು ಬರುತ್ತಿಲ್ಲ" ಅಂದು ಬಿಡುತ್ತಿದ್ದನೇನೋ...
ಬಸ್ಸು ಹತ್ತಲು ನಾನು ಹೋಗುತ್ತಿದಂತೆ ನನ್ನ ಮುಂದೆ ನಡೆಯುತ್ತಿದ್ದ ನನ್ನ ಸಹಪಾಠಿಯನ್ನು ನನ್ನ ಪಕ್ಕದಲ್ಲಿಯೇ ನಡೆದುಕೊಂಡು ಬರುತ್ತಿದ್ದ ಹುಡುಗನೊಬ್ಬ ಮಾತನಾಡಿಸಿದ. ಮಾತು-ಕಥೆ ಹೀಗೆ ನಡೆಯಿತು...
ಅವನಂದ, "ಒಹ್! ನೀವು !@# ಹೈಸ್ಕೂಲಿನಲ್ಲಿ ಓದಿದ್ದು ಅಲ್ವಾ? ನಾನು ಶ್ರೀನಿವಾಸ... ನೆನಪಿದೆ ನಾ? ನಾನು ಅದೇ ಹೈಸ್ಕೂಲಿನಲ್ಲಿ ಓದಿದ್ದು . ನಿಮ್ಮದೇ ಬ್ಯಾಚು... ನೀವು @#& ಅಲ್ಲ?"
ಅವಳು (ಮುಖದಲ್ಲಿ ಮುಗುಳ್ನಗು... ಬಹಳ ಪರಿಚಯದವರನ್ನು ಮಾತನಾಡಿಸುವಂತೆ),"ಹೌದು. ನೀವು ಹೇಗಿದ್ದೀರಾ? ..."
ಅದಕ್ಕವನು, "ನಾನು ಚೆನ್ನಾಗಿದ್ದೀನಿ... ನೀವು ಎಲ್ಲಿ ಕೆಲ್ಸಾ ಮಾಡ್ತಿದ್ದೀರ? "
"ನಾನು *&%$#@ಯಲ್ಲಿ ಹೋದ ತಿಂಗಳು ಸೇರಿಕೊಂಡೆ..."
"ಎಲ್ಲಿ.. ದಾವಣಗೆರೆಗೆ ಹೊರಟಿದ್ದೀರಾ?"
"ಹೌದು... ನೀವು?"
.....
ಮಾತು ಸುಮಾರು ೧೦ ನಿಮಿಷ ನಡೆಯಿತು.. ಅಷ್ಟರಲ್ಲಿ ನಾನು ಬಸ್ಸನ್ನೇರಿ, ನನ್ನ ಜಾಗವನ್ನು ಹುಡುಕಿಕೊಂಡು ಮಲಗಲು ಅಣಿಯಾದೆ... ಸ್ವಲ್ಪ ಸಮಯದ ನಂತರ ಅವಳು ನನ್ನ ಎದುರಿನ ಸೀಟಿನ ಮೇಲೆ ಕುಳಿತಾಗ ಕೇಳಿದೆ,"ನಿನಗೆ ಅವನು ಗೊತ್ತಿದ್ದಾನೇನೆ?"
ಅದಕ್ಕವಳು, "ಇಲ್ಲ! ಅವನು ಯಾರು ಅಂತಾ ನನಗೆ ಗೊತ್ತಿಲ್ಲ!", ಅನ್ನಬೇಕೆ?
ನಾನು, "ಗೊತ್ತಿಲ್ಲವಾ? ಮತ್ತೆ ಇಷ್ಟು ಹೊತ್ತು ಪೂರ್ತಿ ಪಿರಿಚಯದವರಂತೆ ಮಾತನಾಡಿಸಿದೆ?"
ಅವಳು, "ಇಲ್ಲಪ್ಪ... ಅವನು ಅಷ್ಟು ನೆನಪಿಸಿಕೊಂಡು ನನ್ನನ್ನು ಗುರುತಿಸಿದ... ಆದರೆ ನನಗೆ ಅವನ್ಯಾರು ಅಂತ ನೆನಪಿಲ್ಲ... ಪಾಪ ಬೇಜಾರು ಮಾಡ್ಕೋತಾನೆ ಅಂತ ಮಾತಾಡ್ಸಿದೆ..", ಅಂದಳು.
ನನಗೆ ಇನ್ನೂ ಅರ್ಥವಾಗದ ವಿಷಯವಿದು - ಅಪರಿಚಿತರು ಬಂದು ನಾನು ಇಂಥವನು ಅಂತ ನನಗ್ಯಾರಾದರು ಹೇಳಿದ್ದಿದ್ದರೆ, ನನಗೆ ನೆನಪಿಲ್ಲದ ಪಕ್ಷದಲ್ಲಿ ನಾನು "ನೀವು ಯಾರು ಅಂತ ನನಗೆ ನೆನಪು ಬರುತ್ತಿಲ್ಲ" ಅಂದು ಬಿಡುತ್ತಿದ್ದನೇನೋ...
Subscribe to:
Posts (Atom)